ಗುರು ನಮನ ಕಾರ್ಯಕ್ರಮ

Varta Mitra News

ಶಿರಸಿ :

ಶಿರಸಿ ತಾಲೂಕಿನ ಉಪಳೇಕೊಪ್ಪ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.3ರಂದು ಕಳೆದ 27 ವರ್ಷಗಳಿಂದ ಅತ್ಯುತ್ತಮ ಸೇವೆ ಯೊಂದಿಗೆ ಜನ ಮೆಚ್ಚಿದ ಶಿಕಕ್ಷರು ಗೌರವಕ್ಕೆ ಭಾಜನರಾದ ಬಿ.ಎಚ್. ನಾಯಕ ಗುರೂಜಿಗಳಿಗೆ ಅವರ ಅಭಿಮಾನ ಬಳಗ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾಭಿವೃದ್ಧಿ ಸಮಿತಿ ಉಪ್ಪಳೇಕೊಪ್ಪ ಇವರುಗಳ ಸಂಯುಕ್ತ ಆಶ್ರಮದಲ್ಲಿ ಗುರು ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಂಚಳ್ಳಿ ಪಂಚಾಯತ ವ್ಯಾಪ್ತಿಯ ಹಾಗೂ ಗುರೂಜಿಯವರ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸುವರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಅಧ್ಯಕ್ಷತೆ ವಹಿಸುವರು. ಮುಂಜಾನೆ 10 ಗಂಟೆಗೆ ಸಾಯಿ ಮಂದಿರದಿಂದ ಹೊರಡುವ ಭವ್ಯ ಮೆರವಣಿಗೆಯನ್ನು ಕೆ.ಎನ್ ಹೊಸ್ಮನಿ ಉದ್ಘಾಟಿಸುವರು.

ನಂತರ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಗುರು ನಮನ ಕಾರ್ಯಕ್ರಮ, ಸಾಮೂಹಿಕ ಅನ್ನ ಸಂತರ್ಪಣೆ, ಹಾಗೂ ಸಂಜೆ, ಮೇಲೋಡಿಸ್ ತಂಡ ಬೆಂಗಳೂರು, ಜಗ್ಗು ಶಿರಸಿ ಬಳಗ ಬೆಂಗಳೂರು ಹಾಗೂ ಕದಂಬ ಕೊ ವೇದಿಕೆ ಶಿರಸಿ ಇವರುಗಳಿಂದ ಸಂಗೀತ ಕಾರ್ಯಕ್ರಮವನ್ನೂ ಕೂಡಾ ಆಯೋಜಿಸಲಾಗಿದ್ದು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಗುರುಜಿಯ ಸಮಸ್ತ ಅಭಿಮಾನಿಗಳು ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ