ರಸ್ತೆ ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿದ ಬಸ್: ಓರ್ವ ಯುವಕ ಸಾವು ಹಲವರಿಗೆ ಗಾಯ

ಮಡಿಕೇರಿ:ಜೂ-1: ಖಾಸಗಿ ಬಸ್‌ವೊಂದು ಬ್ರೇಕ್‌ ಫೇಲ್‌ ಆದ ಪರಿಣಾಮ ಅಂಗಡಿಗೆ ಗುದ್ದಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರದ ಐ ಬಿ ರೋಡ್‌ನಲ್ಲಿ ತಿರುವು ಪಡೆಯಬೇಕಿದ್ದ ಬಸ್‌ ಬ್ರೇಕ್‌ ಫೇಲ್‌ ಆಗಿದ್ದರಿಂದ ಅತಿ ವೇಗದಲ್ಲಿ ಬಂದು ರಸ್ತೆಯ ಬದಿಯಲ್ಲಿದ್ದ ಅಂಗಡಿಗೆ ಡಿಕ್ಕಿ ಹೊಡೆದಿದೆ. ಬಸ್‌ ವೇಗವಾಗಿ ಬರುತ್ತಿದ್ದನ್ನು ನೋಡಿ ಅಲ್ಲಿದ್ದ ಕೆಲವರು ಓಡಿಹೋಗಿ ಪ್ರಾಣ ಉಳಿಸಿಕೊಂಡರೆ, 21 ವರ್ಷದ ರಾಜೇಶ್‌ ಎಂಬ ಯುವಕನಿಗೆ ಬಸ್‌ ಗುದ್ದಿದೆ. ಡಿಕ್ಕಿ ರಭಸಕ್ಕೆ ಯುವಕ ರಾಜೇಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಬಸ್‌ ಅಪಘಾತ ಸರ್ಕಲ್‌ನಲ್ಲಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ