ನಿಫಾ ವೈರಾಣು ಸೋಂಕು: ಇನ್ನಿಬ್ಬರ ಬಲಿ

ಕಲ್ಲಿಕೋಟೆ, ಮೇ 31- ದೇಶಾದ್ಯಂತ ಆತಂಕ ಉಂಟುಮಾಡಿರುವ ನಿಫಾ ವೈರಾಣು ಸೋಂಕು (ಬಾವಲಿ ಜ್ವರ) ಇನ್ನಿಬ್ಬರನ್ನು ಬಲಿ ತೆಗೆದುಕೊಂಡಿದ್ದು, ಕೇರಳ ರಾಜ್ಯದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿದೆ.
28 ವರ್ಷದ ಅಖಿಲ್ ಎಂಬ ಯುವಕ ಕೋಳಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಮಧುಸೂದನ್ (55) ಎಂಬುವವರು ಸಹ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರಿಬ್ಬರ ಸಾವಿನಿಂದ ಈವರೆಗೆ ಮಾರಕ ನಿಫಾ ಜ್ವರಕ್ಕೆ 15 ಮಂದಿ ಬಲಿಯಾಗಿದ್ದಾರೆ.
ಅಲ್ಲದೆ, 1352 ಮಂದಿ ಬಾವಲಿ ಜ್ವರದಿಂದ ನರಳುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ