ತಾಲ್ಲೂಕು ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕದೆ ಸಾರ್ವಜನಿಕರು, ವಿದ್ಯಾರ್ಥಿಗಳು ಅಲೆಯುವಂಥ ಪರಿಸ್ಥಿತಿ ನಿರ್ಮಾಣ

ಕೊಳ್ಳೆಗಾಲ,ಮೇ 28-ತಾಲ್ಲೂಕು ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕದೆ ಸಾರ್ವಜನಿಕರು, ವಿದ್ಯಾರ್ಥಿಗಳು ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಗಿದೆ. ಕೊಳ್ಳೇಗಾಲ ಗ್ರೇಡ್2, ತಹಸೀಲ್ದಾರ್ ಮಹೇಂದ್ರ ಅವರ ಡಿಜಿಟಲ್ ಸಹಿ ಹೊಂದಿರುವ ಕಾರ್ಡ್ ಅವಧಿ ಮುಗಿದಿರುವುದರಿಂದ ಹನೂರು ತಹಸೀಲ್ದಾರ್ ಮಹದೇವ ಸ್ವಾಮಿ ಅವರಿಗೆ ಪ್ರಭಾರ ಅಧಿಕಾರ ನೀಡಲಾಗಿದೆ. ಆದರೆ ಅವರೂ ಸಹ ಕಳೆದ ಒಂದು ವಾರದಿಂದ ತಾಲ್ಲೂಕು ಕಚೇರಿಗೆ ಭೇಟಿ ನೀಡದೆ ಜಾತಿ ಪ್ರಮಾಣ ಪತ್ರಗಳಿಗೆ ಸಹಿ ಹಾಕುತ್ತಿಲ್ಲ ಎಂದು ದೂರಲಾಗಿದೆ.
ಸರ್ಕಾರಿ ಸೌಲಭ್ಯ ಪಡೆಯುವುದಕ್ಕೆ ಕೇಂದ್ರ ಯೋಜನೆಗಳ ಅವಧಿಮುಗಿಯತ್ತಿರುವುದರಿಂದ ಅಲ್ಲದೆ ಶಾಲಾ ಕಾಲೇಜುಗಳ ದಾಖಲಾತಿಗೂ ಸಹ ತೊಂದರೆಯಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವಂತಾಗಲಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ