ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತ!

ಆನೇಕಲ್, ಮೇ 16-ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಒರಿಸ್ಸಾ ಮೂಲದ ಗೌತಮ್ (12), ಹಿನ್ನಕ್ಕಿ ಗ್ರಾಮದ ಸುಜಿತ್ (12) ಮೃತ ದುರ್ದೈವಿಗಳು.
ಹಿನ್ನಕ್ಕಿ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಈ ಇಬ್ಬರು ಬಾಲಕರು ನಿನ್ನೆ ಸಂಜೆ ಈಗಲು ತೆರಳಿದ್ದಾರೆ.  ಮಕ್ಕಳು ಕಾಣದಿದ್ದ ಬಗ್ಗೆ ಇತ್ತ ಪೆÇೀಷಕರು ರಾತ್ರಿಯಿಡೀ ಹೋರಾಟ ನಡೆಸಿದರೂ ಈ ಬಾಲಕರ ಸುಳಿವು ಪತ್ತೆಯಾಗಿರಲಿಲ್ಲ.
ಆದರೆ ಇಂದು ಬೆಳಗ್ಗೆ ಕೆರೆಯ ದಡದ ಬಳಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದು, ತಕ್ಷಣ ಗ್ರಾಮಸ್ಥರ ನೆರವಿನಿಂದ ಹುಡುಕಾಟ ನಡೆಸಿದಾಗ ಇಬ್ಬರು ಬಾಲಕರ ಮೃತದೇಹಗಳು ಪತ್ತೆಯಾಗಿದೆ.
ಮಕ್ಕಳನ್ನು ಕಳೆದುಕೊಂಡ ಪೆÇೀಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಸ್ಥಳಕ್ಕೆ ಹೆನ್ನಾಗರ ಪಂಚಾಯ್ತಿ ಅಧ್ಯಕ್ಷ ಕೇಶವರೆಡ್ಡಿ ಅವರು ಮೃತ ಮಕ್ಕಳ ಪೆÇೀಷಕರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು.
ಸ್ಥಳಕ್ಕೆ ಸೂರ್ಯಸಿಟಿ ಠಾಣೆ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ