ಮೂಡಬಿದರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾಕಾಂತ್ ಕೋಟ್ಯಾನ್ ಅವರು ಜಯ:

ದಕ್ಷಿಣ ಕನ್ನಡ, ಮೇ 15-ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾಕಾಂತ್ ಕೋಟ್ಯಾನ್ ಅವರು ಜಯಗಳಿಸಿದ್ದಾರೆ. ಇವರ ಸಮೀಪ ಪ್ರತಿಸ್ಪರ್ಧಿ ಮಾಜಿ ಶಾಸಕ ಅಭಯ್‍ಚಂದ್ರ ಜೈನ್ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಇವರು, ಮೊದಲಿನ ಸುತ್ತಿನ ಮತ ಎಣಿಕೆಯಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಉಮಾಕಾಂತ್ ಕೊಟ್ಯಾನ್ ಅವರು ಸುಮಾರು 22 ಸಾವಿರ ಮತಗಳ ಅಂತರದಿಂದ ಜಯಗಳಿಸಿ ವಿಜಯದ ಪ್ರಥಮ ನಗೆ ಬೀರಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪರ ಅಲೆ ಎದ್ದಿದ್ದು, ಕಾಂಗ್ರೆಸ್‍ನ ಆತಂರಿಕ ಕಲಹದ ಲಾಭ ಉಮಾಕಾಂತ್ ಕೋಟ್ಯಾನ್‍ಗೆ ಆದಂತಿದೆ.ಮಾಜಿ ಸಚಿವರಾಗಿದ್ದ ಅಭಯಚಂದ್ರಜೈನ್ ಅವರಿಗೆ ಇಲ್ಲಿ ತೀವ್ರ ಮುಖಭಂಗ ಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ