ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ – ಎಂಇಪಿಯ ಸಿರಾಜುದ್ದೀನ್ ನ ಭರವಸೆ

ಬೆಂಗಳೂರು: ಎಂಇಪಿ ತತ್ವಸಿದ್ದಾಂತಗಳು ಕಾರ್ಯಕ್ರಮಗಳು ಮತ್ತು ಪಕ್ಷದ ಸಂಸ್ಥಾಪಕಿ ಡಾ. ನೌಹೀರಾಶೆಕ್ ಅವರ ಸಮಾಜ ಸೇವೆ ಗೆಲುವಿಗೆ ಸಹಕಾರಿಯಾಗಿದೆ ಎಂಬ ವಿಶ್ವಾಸವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸಿರಾಜುದ್ದೀನ್ ವ್ಯಕ್ತಪಡಿಸಿದ್ದಾರೆ..

ಪಕ್ಷದ ರ್ಯಾಲಿಗೂ ಮುನ್ನಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಳ್ಳೆಯ ಸರಕಾರ ಮತ್ತು ಉತ್ತಮ ಅಭ್ಯರ್ಥಿ ಆಯ್ಕೆ ಜನರ ಕೈಯಲ್ಲೇ ಇದೆ ಎಂದು ಸಂವಿಧಾನಶಿಲ್ಷಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ ಜನರು ತೀರ್ಮಾನ ತೆಗೆದುಕೊಂಡರೆ ಗೆಲುವು ಕಷ್ಟವೇ ಅಲ್ಲ ಎಂದರು.
ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ ಎಲ್ಲಕ್ಕಿಂತ ಮುಖ್ಯವಾಗಿ ಬಡಜರಿಗೆ ಒಳ್ಳೆಯ ಶಾಲೆಗಳು ಮತ್ತು ಬಡಮಹಿಳೆಯರಿಗೆ ಒಳ್ಳೆಯ ಆಸ್ಪತ್ರೆಗಳಿಲ್ಲ .ಇದೆಲ್ಲಕ್ಕಿಂತ ಹೆಚ್ಚಾಗಿ ಬಡವರೆ ಹೆಚ್ಚಾಗಿ ವಾಸಮಾಡುತ್ತಿರುವ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಬಹಳವಾಗಿದೆ. ಜನತೆ ಆಯ್ಕೆ ಮಾಡಿದರೆ ಎಲ್ಲ ಸಮಸ್ಯೆಯನ್ನು ಪರಿಹರಿಸಿ ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸುವೆ ಎಂದರು. ಎಂಇಪಿ ಹೊಸ ಪಕ್ಷವಾದರೂ ಜನರು ಬಹಳ ಬೇಗ ಪಕ್ಷ ಮತ್ತು ಪಕ್ಷದ ಕಾರ್ಯಕ್ರಮಗಳನ್ನು ಗುರುತಿಸಿದ್ದಾರೆ. ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ