ಕೊಪ್ಪಳದಲ್ಲಿ ಮೋದಿ ಅಲೆ: ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ: ಪ್ರಧಾನಿ ಮೋದಿ

Varta Mitra News

ಕೊಪ್ಪಳ :ಮೇ-8: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ್ರು.

ಮೊದಲಿಗೆ ಕನ್ನಡದಲ್ಲಿ ಭಾಷಣ ಶುರುಮಾಡಿದ ಮೋದಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳಿಗೆ ನಮಿಸಿ ಭಾಷಣ ಆರಂಭಿಸಿದ್ರು. ಇನ್ನು, ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸವನ್ನ ಕಾಂಗ್ರೇಸ್ ಸರ್ಕಾರ ಮಾಡಿಲ್ಲ. ಆದ್ರೇ, ನಾವು ೫0 ಸಾವಿರ ಕೋಟಿಯನ್ನ ಯಾತ್ರ ಸ್ಥಳದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ. ಇದು ಕೊಪ್ಪಳದ ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ ಅದಕ್ಕೆ ಪ್ರಯೋಜನ ವಾಗಲಿದೆ. ಅಲ್ದೇ ಆನೆಗೊಂದಿ, ಹಂಪಿಯ ಯಾತ್ರಾ ಸ್ಥಳಕ್ಕೂ ಪ್ರಯೋಜನವಾಗಲಿದೆ ಎಂದರು.

ಕೊಪ್ಪಳದಲ್ಲಿ ಹನುಮಾನ ಮತ್ತು ಶ್ರೀರಾಮರ ಪವಿತ್ರ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ ಇಡೀ ವಿಶ್ವಕ್ಕೆ ಖ್ಯಾತಿಯಾಗಿದೆ, ಇದನ್ನು ವಿಶ್ವಮಟ್ಟದ ಯಾತ್ರಾ ಸ್ಥಳ ಮಾಡುವುದೇ ನನ್ನ ಕನಸು ಎಂದು ಪ್ರಧಾನಿ ಹೇಳಿದರು.

ಹವಾಯಿ ಚಪ್ಪಲಿ ಹಾಕುವವನು ಹವಾಯಿ ಜಹಾಜ್ ನಲ್ಲಿ ಕೂಡುವಂತೆ ಮಾಡುತ್ತೇನೆ ಎಂದು ಭರವಸೆಗಳನ್ನು ನಿದರು. ಇನ್ನೂ, ಶೌಚಾಲಯ ಆಂದೋಲನ ಆರಂಭ ಮಾಡಿದ ಕೊಪ್ಪಳದ ಮಲ್ಲಮ್ಮನನ್ನು‌ ನೆನೆಸಿದ ಮೋದಿ, ಎರಡು ವರ್ಷದ ಕೆಳಗಡೆ ಮಲ್ಲಮ್ಮನ ಹೆಸರು ಮನ್ ಕಿ ಬಾತ್ ನಲ್ಲಿ ನಾನು ಪ್ರಸ್ತಾಪಿಸಿದ್ದೆ, ಅಲ್ದೇ, ದೇಶದ ಶೌಚಾಲಯ ಅಭಿಯಾನಕ್ಕೆ ಮಲ್ಲಮ್ಮ ಪ್ರೇರಣೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ