ಔರಾದ್‍ನಲ್ಲಿ ಕೌಡಾಳ್ ಮಿಂಚಿನ ಸಂಚಾರ ಸರ್ವ ಸಮಾಜದ ಪಕ್ಷ ಕಾಂಗ್ರೆಸ್

ಔರಾದ್‍ನಲ್ಲಿ ಕೌಡಾಳ್ ಮಿಂಚಿನ ಸಂಚಾರ
ಸರ್ವ ಸಮಾಜದ ಪಕ್ಷ ಕಾಂಗ್ರೆಸ್
ಮೀಸಲು ಕ್ಷೇತ್ರ ಔರಾದ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಪಾದಯಾತ್ರೆ ನಡೆಸಿ ಮತಯಾಚಿಸುತ್ತಿದ್ದಾರೆ. ಶುಕ್ರವಾರ ಔರಾದ್ ಪಟ್ಟಣದ ದೇಶಮುಖ ಗಲ್ಲಿ, ಧನಗಾರ್ ಗಲ್ಲಿಯಲ್ಲಿ ಮನೆ, ಮನೆಗೆ ತೆರಳೀ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ವಿಜಯಕುಮಾರ ಕೌಡಾಳ, ಇಂದು ಸಮಾಜದಲ್ಲಿ ಎರಡು ವಿಚಾರ, ತತ್ವಗಳ ಸಂಘರ್ಷ ನಡೆದಿದೆ. ಒಂದೆಡೆ ಬಸವಣ್ಣ, ಡಾ. ಅಂಬೇಡ್ಕರರ ಸಾಮಾಜಿಕ ನ್ಯಾಯತತ್ವ, ಮತ್ತೊಂದೆಡೆ ಬಿಜೆಪಿ, ಆರ್‍ಎಸ್‍ಎಸ್‍ನವರ ಕೋಮುವಾದ ಹಬ್ಬಿಸುವವರ ನಡುವೆ ಸಂಘರ್ಷ ನಡೆದಿದೆ. ಯಾರಿಂದ ದೇಶಕ್ಕೆ ಒಳಿತಿದೆ ಎನ್ನುವುದು ಮತದಾರರು ಅರ್ಥ ಮಾಡಿಕೊಳ್ಳಬೇಕಿದೆ.

ದೇಶದಲ್ಲಿ ಎಲ್ಲ ಸಮಾಜದವರು ಸಮಾನ ಬಾಳಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾತ್ರ ಸಾಧ್ಯ ಎಂದರು.

ದಲಿತರ, ಅಂಬೇಡ್ಕರ್ ಬಗ್ಗೆ ಗಂಟೆಗಟ್ಟಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಾರೆ. ಆದರೆ ಅದೇ ದಲಿತರ ಮೇಲೆ ಅತ್ಯಾಚಾರ ನಡೆದರೆ ಒಂದೂ ಮಾತನಾಡಲ್ಲ.

ಮಹಿಳೆ, ಮಕ್ಕಳ ರಕ್ಷಣೆ ಕಾಂಗ್ರೆಸ್‍ನಿಂದ ಸಾಧ್ಯ. ಕ್ಷೇತ್ರದ ಜನತೆ ಪರಿವರ್ತನೆ ಬಯಸಿದ್ದು, ಬಿಜೆಪಿಗೆ ಪಾಠ ಕಲಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ ಎಂದರು.

ಪ್ರಮುಖರಾದ ಬಾಲಾಜಿ ನರೋಟೆ, ಅಬ್ದುಲ್ ರಹೀಮ್, ಎಂ.ಡಿ. ಗೌಸಪಾಶಾ, ಗುಂಡು ಮುದಾಳೆ, ಅತೀಕ್, ಶಿವು ಕಾಂಬ್ಳೆ ಸೇರಿದಂತೆ ಹಲವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ