ಚಂದಾಪುರ ಸಮೀಪವಿರುವ ರಾಮಸಾಗರ ಗ್ರಾಮದ ಡೈರಿ ನಾರಾಯಣರೆಡ್ಡಿ ಮೇಲೆ ಐದು ಮಂದಿ ದುಷ್ಕರ್ಮಿಗಳ ತಂಡ ಕೊಲೆ ಮಾಡಲು ಯತ್ನ:

ಆನೇಕಲ್, ಮೇ 3 – ಚಂದಾಪುರ ಸಮೀಪವಿರುವ ರಾಮಸಾಗರ ಗ್ರಾಮದ ಡೈರಿ ನಾರಾಯಣರೆಡ್ಡಿ ಮತ್ತು ಮಕ್ಕಳಾದ ಸುಧಾಕರ್ ಮತ್ತು ಚಂದನ್ ಎಂಬುವರ ಮೇಲೆ ಐದು ಮಂದಿ ದುಷ್ಕರ್ಮಿಗಳ ತಂಡ ಕೊಲೆ ಮಾಡಲು ಯತ್ನಿಸಿರುವ ಘಟನೆ ಕಳೆದ ರಾತ್ರಿ 10ರ ಸಮಯದಲ್ಲಿ ನಡೆದಿದೆ.
ಡೈರಿ ನಾರಾಯಣರೆಡ್ಡಿ ರಾತ್ರಿ 10 ಗಂಟೆ ಸಮಯದಲ್ಲಿ ಮನೆಯೊಳಗೆ ಹೋಗುತ್ತಿದ್ದಂತೆ ಮಂಕಿ ಕ್ಯಾಪ್ ಧರಿಸಿದ್ದ ದುಷ್ಕರ್ಮಿಗಳು ಒಳ ನುಗ್ಗಿ ಏಕಾ ಏಕಿ ಡೈರಿ ನಾರಾಯಣರೆಡ್ಡಿ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾರೆ.
ಇದನ್ನು ಕಂಡ ಡೈರಿ ನಾರಾಯಣರೆಡ್ಡಿ ಪತ್ನಿ ಜೋರಾಗಿ ಕಿರುಚುತಿದ್ದಂತೆ ರೂಮಿನಲ್ಲಿದ್ದ ಮಕ್ಕಳಾದ ಸುಧಾಕರ್ ಮತ್ತು ಚಂದನ್ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಅವರನ್ನು ಸಹ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಸುಧಾಕರ್ ಓರ್ವ ದುಷ್ಕರ್ಮಿಯಿಂದ ಚಾಕುವನ್ನು ಕಿತ್ತುಕೊಂಡು ಅದೇ ಚಾಕುವಿನಿಂದ ದುಷ್ಕರ್ಮಿಗೆ ತಿವಿದ ತಕ್ಷಣ ದುಷ್ಕರ್ಮಿ ಕೆಳಗೆ ಕುಸಿದು ಬಿದ್ದಿದ್ದು ಇದನ್ನು ಕಂಡ ನಾಲ್ಕು ಜನ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು ಎಂದು ಡೈರಿ ನಾರಾಯಣರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.
ಅನುಮಾನ : ದುಷ್ಕರ್ಮಿಗಳು ದರೋಡೆಗೆ ಬಂದಿದ್ದರೆ ಅಥವಾ ವೈಯಕ್ತಿಕ ದ್ವೇಷವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಸೂರ್ಯನಗರ ಪೆÇೀಲಿಸರು ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಸೂರ್ಯನಗರ ಪೆÇೀಲಿಸರು ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ