ಸೂರ್ಯಕಾಂತಗೆ ನಾಗಮಾರಪಳ್ಳಿಗೆ ಬೆಂಬಲ ಸೂಚಿಸಿದ 32 ಸಂಘಟನೆ

ಬೀದರ್, ಏ.30- ಬೀದರ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಜಿಲ್ಲೆಯ 32 ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷರುಗಳು ಬೆಂಬಲ ಸೂಚಿಸಿದರು.

ಕನ್ನಡಪರ ಸಂಘಟನೆಗಳವರ ಪರವಾಗಿ ಮಾತನಾಡಿದ ಮುಖಂಡ ಶ್ರೀಮಂತ ಸಪಾಟೆ, ಯುವಕರ ಕಣ್ಮಣಿಯಾಗಿರುವ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ತರುವ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಕೆಲಸ ಮಾಡಲಿವೆ ಎಂದರು.

ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆಯ ವಾತಾವರಣವಿದ್ದು, ಸ್ಥಳೀಯ ಶಾಸಕರ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಜನರಿಗೋಸ್ಕರ ಕೆಲಸ ಮಾಡುತ್ತಿರುವ ನಾಗಮಾರಪಳ್ಳಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಆನಂದ ಘಂಟೆ (ಜಯ ಕರ್ನಾಟಕ), ಸಂಗಮೇಶ ಗಾದಗಿ-ಸ್ವತಂತ್ರ ಕರವೇ, ಮಾಣಿಕೇಶ ಪಾಟೀಲ್-ಕ.ರ.ವೇ.(ಪ್ರವೀಣಶೆಟ್ಟಿ ಬಣ), ಶಿವಕುಮಾರ ತುಂಗಾ-ಕರವೇ (ನಾರಾಯಣಗೌಡ ಬಣ), ಪ್ರಶಾಂತ ತಪಶ್ಯಾಳೆ-ಜೈ ಕರವೇ, ವಿಷ್ಣುವರ್ಧನ ವಾಲ್ದೊಡ್ಡಿ (ಅಂಬೇಡ್ಕರ ಸೇನೆ), ಸಾವನ ವಾಗ್ಲೆ- (ಕರವೇ ಶಿವರಾಮೇಗೌಡ ಬಣ), ಸಂಗಮೇಶ ನೇಳಗೆ (ಕನ್ನಡಾಂಬೆ ಗೆಳೆಯರ ಬಳಗ), ಅನೂಪ ಕುಲಕರ್ಣಿ (ನವ ಕರ್ನಾಟಕ ನಿರ್ಮಾಣ ವೇದಿಕೆ), ರಾಜಕುಮಾರ ಕುಂಬಾರವಾಡಾ (ಕರುನಾಡು ಸಂಘ), ಶಿವಕುಮಾರ ಕಮಠಾಣೆ (ಭಾರತ ರಕ್ಷಣಾ ವೇದಿಕೆ), ವಿ.ಎಲ್. ಮಾರ್ಟಿನ್ (ನಮ್ಮ ಕರವೇ), ಮಹೇಶ ಉದಗಿರೆ (ಮಾನವ ಹಿತರಕ್ಷಣಾ ವೇದಿಕೆ), ರಾಜು ಕಾಂಬ್ಳೆ (ಡಿಎಸ್‍ಎಸ್), ರಾಜಕುಮಾರ ಭಾವಿಕಟ್ಟಿ (ಭೀಮಶಕ್ತಿ), ಮಡೆಪ್ಪ ಹಾರೂರಗೇರಿ, ರವೀಂದ್ರ ದೇವಗುಡೆ, ಅಮರ ಪೂಜಾರಿ, ಸಾಯಿ ಸಿಂಧೆ, ಪ್ರಭು ಮದರ್ಗಿಕರ್, ಪ್ರವೀಣಕುಮಾರ, ಪಂಡಿತ ಬಿರಾದಾರ, ಅನೀಲಕುಮಾರ ಭವಾನಿ, ದಶರಥ ಹೊಸಮನಿ, ಪವನ ಬೌದ್ಧೆ, ಅವಿನಾಶ ಶಾಹಗಂಜ, ದೀಪಕ ಕಾಂಬ್ಳೆ-ದಲಿತ ಬ್ರಿಗೇಡ, ರಾಜು ಕೊಳಾರ, ಪ್ರದೀಪ ಕುದರೆ, ಅರುಣ ಕೋಡಗೆ, ಗೌತಮ ದೊಡ್ಡಮನಿ, ವಿನೋದಕುಮಾರ ನೌಬಾದೆ ಇತರರು ಬೆಂಬಲ ಸೂಚಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ