ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ:

ಜಮ್ಮು, ಏ.30-ಜಮ್ಮು ಮತ್ತು ಕಾಶ್ಮೀರ ವಿಧಾನಸಭಾಧ್ಯಕ್ಷ ಕವೀಂದರ್ ಗುಪ್ರಾ ಮತ್ತು ಇತರ ಏಳು ಮಂದಿ ಇಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎನ್.ಎನ್.ವೋರಾ ನೂತನ ಸಚಿವರಿಗೆ ಗೋಪ್ಯ ವಿಧಿ ಬೋಧಿಸಿದರರು.
ಕವೀಂದರ್ ಗುಪ್ತಾ ಜಮ್ಮು ಮತ್ತು ಕಾಶ್ಮೀರದ ಹೊಸ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಸಂಪುಟ ವಿಸ್ತರಣೆಗೆ ಮುನ್ನ ನಿನ್ನೆ ರಾತ್ರಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ರಾಜೀನಾಮೆ ನೀಡಿದ್ದರು.  ಪಕ್ಷದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತ್ಪಲ್ ಶರ್ಮ, ಕತುವಾ ಶಾಸಕ ಜಸ್‍ರೊಟಿಯಾ ಮತ್ತು ಸಂಬಾ ಎಂಎಲ್‍ಎ ದೇವೀಂದರ್ ಕುಮಾರ್ ಮನ್‍ಯಾಲ್ ಪ್ರಮಾಣ ವಚನ ಸ್ವೀಕರಿಸಿದರು.
ಹಾಲಿ ಸಾರಿಗೆ ಖಾತೆ ರಾಜ್ಯ ಸಚಿವ ಸುನಿಲ್ ಶರ್ಮ ಅವರಿಗೆ ಸಂಪುಟ ಸಚಿವರಾಗಿ ಬಡ್ತಿ ನೀಡಲಾಗಿದೆ. ಬಿಜೆಪಿ ಶಾಸಕ ಶಕ್ತಿ ರಾಜ್ ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.
ಸಂಪುಟಕ್ಕೆ ಸೇರ್ಪಡೆಯಾದ ಪಿಡಿಪಿ ಸದಸ್ಯರೆಂದರೆ ಮಹಮದ್ ಖಲೀಲ್ ಬಂಡ್, ಮತ್ತು ಮಹಮದ್ ಆಶ್ರಫ್ ಮಿರ್.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ