ಐರಾವತ ಬಸ್‍ನ ಎಂಜಿನ್‍ನಲ್ಲಿ ಬೆಂಕಿ: ಆತಂಕ ಸೃಷ್ಟಿಸಿದ ಅವಘದ

ಬೆಂಗಳೂರು, ಏ.26-ಬೆಂಗಳೂರಿನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಐರಾವತ ಬಸ್‍ನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಸಮಯ ಆತಂಕ ಸೃಷ್ಟಿಯಾಗಿತ್ತು.
ರಾತ್ರಿ 11.15 ರ ಸಮಯದಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಐರಾವತ ಬಸ್‍ನಲ್ಲಿ ದೇವನಹಳ್ಳಿ ವ್ಯಾಪ್ತಿಯ ರಾಣಿ ಸರ್ಕಲ್ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲ ಕೆಳಗಿಳಿದಿದ್ದಾರೆ.
ಬಸ್‍ನ ಹಿಂಬದಿಯ ಎಂಜಿನ್‍ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸ್ಥಳೀಯರೊಂದಿಗೆ ಸೇರಿ ನಂದಿಸಲಾಗಿದೆ. ಪರಿಣಾಮವಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ತದನಂತರ ಪ್ರಯಾಣಿಕರೆಲ್ಲ ನಿಟ್ಟುಸಿರು ಬಿಟ್ಟು ಪ್ರಯಾಣ ಮುಂದುವರೆಸಿದರು.
ಈ ಸಂಬಂಧ ದೇವನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ