ಮುಖ್ಯಮಂತ್ರಿ ಸಿದ್ಯರಾಮಯ್ಯನವರು ಇಲವಾಲ ಜಟ್ಟಿಹುಂಡಿ ಸೇರಿದಂತೆ 20ಗ್ರಾಮಗಳಲ್ಲಿ ಮತಯಾಚನೆ:

ಮೈಸೂರು, ಏ.18- ಮುಖ್ಯಮಂತ್ರಿ ಸಿದ್ಯರಾಮಯ್ಯನವರು ಇಂದು ಇಲವಾಲ ಜಟ್ಟಿಹುಂಡಿ ಸೇರಿದಂತೆ 20ಗ್ರಾಮಗಳಲ್ಲಿ ಮತಬೇಟಿ ನಡೆಸಿದರು.
ನಿನ್ನೆ ಸಿಎಂ,ತಮ್ಮ ಪುತ್ರ ಡಾ. ಯತೀಂದ್ರ ಪರವಾಗಿ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದರು. ಇಂದು ಇಡೀ ದಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೂಡಗಿದರು. ಏ.20ರಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದಾರೆ. ಸಿದ್ದರಾಮಯ್ಯ ಆಗಮಿಸುತಿದ್ದಂತೆ ಕೆಲ ಗ್ರಾಮಗಳಲ್ಲಿ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರೆ ಮತ್ತೆ ಕೆಲವಡೆ ಅಭಿಮಾನಿಗಳು ಹಾರ ತುರಾಯಿ ಹಾಕಿ ಬರಮಾಡಿಕೊಂಡರು.
ಪ್ರಚಾರದ ಸಂದರ್ಭದಲ್ಲಿ ಕಾಟೂರು ಗ್ರಾಮದ ಕೆಲ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ