ಶಾಸಕ ಚವ್ಹಾಣ್ ನೇತೃತ್ವದಲ್ಲಿ ಬೈಕ್ ರ್ಯಾಲಿ

ಬೀದರ್: ಎ 14. ಔರಾದ್: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಶುಕ್ರವಾರ ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು. ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಔರಾದ್ ಕ್ಷೇತ್ರದ ಹೋಬಳಿ ಕೇಂದ್ರಗಳಲ್ಲಿ ಬೈಕ್ ರ್ಯಾಲಿ ನಡೆಸಿದ್ದಾರೆ.

ಇಲ್ಲಿಯ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಬೈಕ್ ರ್ಯಾಲಿಗೆ ಶಾಸಕ ಚವ್ಹಾಣ್ ಚಾಲನೆ ನೀಡಿದರು. ಶಾಸಕ ಚವ್ಹಾಣ್ ಕಾರ್ಯಕರ್ತರೊಂದಿಗೆ ಖುದ್ದು ಬೈಕ್ ಮೇಲೆ ಕುಳಿತುಕೊಂಡು ರ್ಯಾಲಿ ನಡೆಸಿದ್ದು ಅಚ್ಚರಿ ಮೂಡಿಸಿದರು.

ಔರಾದ್‍ನಿಂದ ಆರಂಭವಾದ ರ್ಯಾಲಿ, ಮಮದಾಪುರ, ತೇಗಂಪುರ, ಎನಗುಂದಾ, ಕಾಶೆಂಪುರ ಮಾರ್ಗವಾಗಿ ಚಿಂತಾಕಿ ಹೋಬಳಿ ಕೇಂದ್ರಕ್ಕೆ ತಲುಪಿತು. ಶಾಸಕ ಪ್ರಭು ಚವ್ಹಾಣ ಅವರು ಈ ವೇಳೆ ಮಾಜಿ ಸಚಿವ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಚಿಂತಾಕಿಯಿಂದ ಉಜನಿ, ವಡಗಾಂವ್, ಬೋರ್ಗಿ, ನಾಗೂರ್, ಜೋಜನಾ, ಸಂತಪುರ, ಠಾಣಾ ಕುಶನೂರ್, ಬಳತ್, ಸಂಗಮ್, ಹೊಳಸಮುದ್ರ, ಸಾವಳಿ, ಡಿಗ್ಗಿ ಮಾರ್ಗವಾಗಿ ಕಮಲನಗರ ತಲುಪಿತು. ನೂತನ ತಾಲೂಕು ಕೇಂದ್ರ ಕಮಲನಗರದಲ್ಲಿ ಶಾಸಕ ಪ್ರಭು ಚವ್ಹಾಣ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಂಡೆಪ್ಪ ಕಂಟೆ, ಜಿಪಂ ಮಾಜಿ ಸದಸ್ಯ ವಸಂತ ಬಿರಾದಾರ್, ತಾಲೂಕು ಅಧ್ಯಕ್ಷ ಸತೀಶ ಪಾಟೀಲ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್, ತಾಲೂಕು ಅಧ್ಯಕ್ಷ ವೀರೇಂದ್ರ ರಾಜಪೂರೆ, ಯುವ ಮುಖಂಡ ದೀಪಕ್ ಪಾಟೀಲ್, ಡಾ. ಕಲ್ಲಪ್ಪ ಉಪ್ಪೆ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ ಮತ್ತಿತರರು ಉಪಸ್ಥಿತರಿದ್ದರು.
===============================================================================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ