ಕನ್ನಡ ಕ್ರಿಯ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ

ಬೆಂಗಳೂರು,ಏ.13-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯ ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರಿಗೆ ಹಾಗೂ ನಾಡುನುಡಿಗಾಗಿ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ ಕನ್ನಡಕ್ರಿಯ ಸಮಿತಿಯ ಪದಾಧಿಕಾರಿಗಳಿಗೆ ಇದೇ 16ರಂದು ಸಂಜೆ 5.30ಕ್ಕೆ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.

ಹಿರಿಯ ವಿದ್ವಾಂಸ , ವಿಶ್ರಾಂತ ಕುಲಪತಿ ಪೆÇ್ರ.ಮಲ್ಲೇಪುರಂ ವೆಂಕಟೇಶ್ ಅವರು ಸಾಹಿತಿ ದೊಡ್ಡರಂಗೇಗೌಡರಿಗೆ ಅಭಿನಂದಿಸಲಿದ್ದಾರೆ.

ಕರಾರಸಾಸಂ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಮಂಗಳ ಪ್ರಿಯದರ್ಶಿನಿ ಆಗಮಿಸುತ್ತಿದ್ದಾರೆ.

ಕನ್ನಡ ಕ್ರಿಯಾ ಸಮಿತಿ ಪಾಧಿಕಾರಿಗಳಾದ ಎಸ್.ಪ್ರಾನ್ಸಿಕುಮಾರ್, ಟಿ.ಕೃಷ್ಣ , ಟಿ.ಆರ್.ಸೋಮಶೇಖರ್, ಕೆ.ಎಸ್.ಅನಂತರಾಜು, ಎಸ್.ಶ್ರೀನಾತ್, ಎಸ್.ಸಿ.ವಿಜೇಂದ್ರ, ಎಂ.ಎನ್.ರಂಗನಾಥರಾವ್, ಮಾರ್ಟಿನ್ ರಾಜ್ ಅವರನ್ನು ಸನ್ಮಾಸಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಎಚ್.ಕೆ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ