ಅಂಬೇಡ್ಕರ್ ಸಮಾಜ ಪಕ್ಷದ ಎರಡನೇ “ಅಭ್ಯರ್ಥಿಗಳ ಪಟ್ಟಿ” ಬಿಡುಗಡೆ

ಬೆಂಗಳೂರು ಎ13: ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅಂಬೇಡ್ಕರ್ ಸಮಾಜ ಪಕ್ಷ ಅವರ 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎರಡನೆಯ ಪಟ್ಟಿಯಲ್ಲಿ 33 ಅಭ್ಯರ್ಥಿಗಳ್ಳನ್ನು ಘೋಷಣೆ ಮಾಡಿದ್ದು, ಈ ಹಿಂದೆ ಮಾರ್ಚ್ 30 ರಂದು ಮೊದಲನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 25 ಅಭ್ಯರ್ಥಿಗಳನ್ನು ಅಂದು ಘೋಷಣೆ ಮಾಡಿದ್ದರು. ಎರಡು ಪಟ್ಟಿಗಳು ಸೇರಿ ಒಟ್ಟು 58 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಇನ್ನು ಏಪ್ರಿಲ್ ೧೬ ರಂದು ಮೂರನೆಯ ಪಟ್ಟಿ ಬಿಡುಗಡೆ ಮಾಡುವುದು ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಅಶೋಕ್ ರವರು ಹೇಳಿದರು. ಎಲ್ಲ ೨೨೪ ಕ್ಷೇತ್ರಗಳ್ಳಲ್ಲಿ ಅಭ್ಯರ್ಥಿಗಳ್ಳನ್ನು ರಣಕ್ಕಿಳಿಸಲು ಎಲ್ಲಾ ತಯ್ಯಾರಿ ನಡೆಸಿದ್ದಾರೆ.

ದಲಿತರು ಮತ್ತು ಅಲ್ಪಸಂಖ್ಯಾತರ ಆದ್ಯತೆ ನೀಡಲು 2018 ರ ಚುನಾವಣೆಯ ಅಂಬೇಡ್ಕರ್ ಸಮಾಜ ಪಾರ್ಟಿಯ ಪ್ರಾಥಮಿಕ ಕರೆಯಾಗಿದೆ.

ಸಭೆಯಲ್ಲಿ ಕರ್ನಾಟಕ ಉಸ್ತುವಾರಿ ಆದ ಶ್ರೀ ನರೇಶ್ ಸಿಂಧು ರವರು ಪಾಲ್ಗೊಂಡು ಕರ್ನಾಟಕ ರಾಜ್ಯಾಧ್ಯಕ್ಷರು ಅಶೋಕ್, ಉಪಾಧ್ಯಕ್ಷರು ಜಮೀರ್ ಮತ್ತು ಅನ್ಯ ನಾಯಕರು ಹಾಗು ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ