ಡಾ.ಬಾಬಾ ಸಾಹೇಬ ಅಂಬೇಡ್ಕರ್ ಶತಮಾನೋತ್ಸವ ಸಮಿತಿಯಿಂದ ಬೋಧಿವೃಕ್ಷ- ಬೋಧ ವರ್ಧನ ಪ್ರಶಸ್ತಿ

 

ಬೆಂಗಳೂರು,ಏ.10- ತಳಸ್ತರದವರ ಅಭಿವೃದ್ದಿಗಾಗಿ ದುಡಿದವರನ್ನು ಗುರುತಿಸಿ ಬೆಂಬಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ಬೋಧಿವೃಕ್ಷ- ಬೋಧ ವರ್ಧನ ಪ್ರಶಸ್ತಿಗಳನ್ನು ನೀಡುತ್ತಿದೆ.
ಟ್ರಸ್ಟ್ ವತಿಯಿಂದ ಏ.14ರ ಅಂಬೇಡ್ಕರ್ ಜಯಂತಿಯಂದು ನಡೆಸುವ ಅಂಬೇಡ್ಕರ್ ಹಬ್ಬದ ಅಂಗವಾಗಿ ತಳಸ್ತರದವರ ಏಳಿಗಾಗಿ ದುಡಿದವರನ್ನು ಗೌರವಿಸಲಾಗುತ್ತಿದ್ದು, ಅಖಿಲ ಭಾರತೀಯ ಮಟ್ಟದ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡುವುದಕ್ಕೆ ಯಾವುದೇ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ. ಸ್ಪೂರ್ತಿಧಾಮ ರಚಿಸುವ ಸಮಿತಿಯು ಈ ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡುತ್ತದೆ .

ಬೋಧಿ ವೃಕ್ಷ ಪ್ರಶಸ್ತಿಗೆ ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಹಾಗೂ ಬೋಧಿವರ್ಧನ ಪ್ರಶಸ್ತಿಗೆ ತಲಾ ಇಪ್ಪತ್ತು ಸಾವಿರ ರೂ. ಹಾಗೂ ಫಲಕ ನೀಡಲಾಗುತ್ತದೆ ಎಂದು ಸ್ಪೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ