ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್ ಜತೆ ಇರಲು ಬಯಸುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಲಿ

ಬೆಂಗಳೂರು,ಏ.8- ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್‍ನಲ್ಲಿರಲು ಬಯಸುತ್ತದೆಯೋ ಎಂಬುದನ್ನು ಬಹಿರಂಗವಾಗಬೇಕು. ಈ ವಿಷಯವಾಗಿ ಜೆಡಿಎಸ್‍ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಿಳಿಸಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ಉಪಹಾರ ಕೂಟ ನಡೆಸಿ ಪತ್ರಕರ್ತರ ಜತೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜಾತ್ಯತೀತ ನಿಲುವಿನ ಕರ್ನಾಟಕ ಕೋಮುವಾದಿ ನಾಗಪುರ ಸಿದ್ದಾಂತಗಳ ನಡುವೆ ಸಂಘರ್ಷ ನಡೆಯುತ್ತಿದೆ. ಈ ಹಂತದಲ್ಲಿ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವುದೇ ಆದರೆ ಜೆಡಿಎಸ್ ಮೊದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್‍ಗಾಂಧಿ, ಚುನಾವಣೆಯ ನಂತರ ಯಾರ ಜತೆಗೂ ಮೈತ್ರಿ ಬೆಳೆಸಲು ಕಾಂಗ್ರೆಸ್ ಬಯಸುವುದಿಲ್ಲ. ಚುನಾವಣೆಗೂ ಮೊದಲು ಇಂತಹ ಸಂದರ್ಭಗಳನ್ನು ಪರಿಶೀಲಿಸುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ