ದಂಪತಿಯನ್ನು ಹಿಂಬಾಲಿಸಿ ದರೋಡೆಕೋರರು ಮಾರಕಾಸ್ತ್ರಗಳಿಂದ ಬೆದರಿಸಿ ಬ್ಯಾಗ್ ಕಸಿದು ಪರಾರಿ

ಬೆಂಗಳೂರು, ಏ.6-ಸಿನಿಮಾಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ದಂಪತಿಯನ್ನು ಹಿಂಬಾಲಿಸಿ ಬಂದ ದರೋಡೆಕೋರರು ಮಾರಕಾಸ್ತ್ರಗಳಿಂದ ಬೆದರಿಸಿ ಸರ ಎಗರಿಸಲು ವಿಫಲ ಯತ್ನ ನಡೆಸಿ ಬ್ಯಾಗ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತ್ಯಾಗರಾಜನಗರ ನಿವಾಸಿ ಎಂ.ಬಿ.ನಾಗರಾಜ್ ಎಂಬುವರು ನಿನ್ನೆ ರಾತ್ರಿ ಪತ್ನಿಯೊಂದಿಗೆ ಸೆಕೆಂಡ್ ಶೋ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿಸಿಕೊಂಡು ಬೆಳಗಿನ ಜಾವ 1 ಗಂಟೆಯಲ್ಲಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು.

ಇನ್ನೇನು ಮನೆ ಬಳಿ ಬರುತ್ತಿದ್ದಂತೆ ಇವರನ್ನು ಹಿಂಬಾಲಿಸಿಕೊಂಡು ಒಂದೇ ಬೈಕ್‍ನಲ್ಲಿ ಮೂವರು ದರೋಡೆಕೋರರು ಹಾಗೂ ಮತ್ತೊಂದು ಬೈಕ್‍ನಲ್ಲಿ ಮತ್ತೊಬ್ಬ ದರೋಡೆಕೋರ ಬಂದಿದ್ದರು.

ಪೆಟ್ರೋಲ್ ಬಂಕ್ ಸಮೀಪದ ಸಿಟಿ ಬೆಡ್ ಬಳಿ ದಂಪತಿಯನ್ನು ಅಡ್ಡಗಟ್ಟಿದ ದರೋಡೆಕೋರರು ಮಾರಕಾಸ್ತ್ರಗಳಿಂದ ಬೆದರಿಸಿ ನಾಗರಾಜ್ ಪತ್ನಿಯ ಸರ ಕಸಿದುಕೊಳ್ಳಲು ಯತ್ನಿಸಿದಾಗ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಗಾಬರಿಯಾದ ದರೋಡೆಕೋರರು ಕೈಯಲ್ಲಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಬ್ಯಾಗ್‍ನಲ್ಲಿ ಎರಡು ಮೊಬೈಲ್, ಎರಡು ಸಾವಿರ ಹಣ, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‍ಗಳಿದ್ದವು ಎಂದು ನಾಗರಾಜ್ ಪೆÇಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಿ.ಕೆ.ಅಚ್ಚುಕಟ್ಟು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ