ಬೆಂಗಳೂರು, ಏ.4-ಸೆಕೆ ಎಂದು ಕಿಟಕಿ ತೆರೆದು ಮಲಗಿದ್ದಾಗ ಕಳ್ಳ ಕಿಟಿಕಿ ಮೂಲಕ ಕೈ ತೂರಿಸಿ ಸರ ಎಗರಿಸಲು ವಿಫಲ ಯತ್ನ ನಡೆಸಿ ಕೈಗೆ ಸಿಕ್ಕ ಮೊಬೈಲ್ನೊಂದಿಗೆ ಪರಾರಿಯಾಗಿರುವ ಘಟನೆ ವಿದ್ಯಾರಣ್ಯಾಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಭ್ರಮ್ ಕಾಲೇಜು ಸಮೀಪದ ಬೆಸ್ಟ್ ಕೌಂಟ್ ಡಿ ಬಡಾವಣೆಯಲ್ಲಿ ವಾಸವಾಗಿರುವ ರಾಜು ಎಂಬುವರು ಮನೆಯಲ್ಲಿ ಕಳ್ಳತನ ನಡೆದಿದೆ.
ರಾತ್ರಿ ಸೆಕೆ ಎಂದು ರಾಜು ಕುಟುಂಬದವರು ಕಿಟಕಿ ತೆರೆದು ನಿದ್ರೆಗೆ ಜಾರಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳಕಿಟಕಿ ಮೂಲಕ ಕೈ ತೂರಿಸಿ ಸರ ಎಗರಿಸಲು ವಿಫಲ ಯತ್ನ ನಡೆಸಿ ನಂತರ ಕೈಗೆ ಸಿಕ್ಕ ಮೊಬೈಲ್ನೊಂದಿಗೆ ಪರಾರಿಯಾಗಿದ್ದಾನೆ.
ಈ ಸಂಬಂಧ ರಾಜು ಅವರು ವಿದ್ಯಾರಣ್ಯಾಪುರ ಠಾಣೆಗೆ ದೂರು ನೀಡಿದ್ದಾರೆ.
ಎಚ್ಚರದಿಂದಿರಿ:
ಬೇಸಿಗೆ ಆರಂಭವಾಗಿದ್ದು , ಸೆಕೆ ಎಂದು ಕಿಟಕಿ ಬಾಗಿಲು ತೆರೆದು ಮೈ ಮರೆಯದಿರಿ. ಬೆಲೆ ಬಾಳುವ ವಸ್ತುಗಳನ್ನು ಕಿಟಕಿ ಸಮೀಪ ಇಡುವುದಾಗಲಿ ಅಥವಾ ಅಭರಣ ಧರಿಸಿಕೊಂಡು ಕಿಟಕಿ ತೆರೆದು ಮಲಗದಿರಿ.
ಕಳ್ಳರು ಇಂತಹ ಸಮಯಕ್ಕಾಗಿಯೇ ಕಾಯುತ್ತಿರುತ್ತಾರೆ. ಆದ್ದರಿಂದ ಕುಟುಂಬಸ್ಥರು ಈ ಬಗ್ಗೆ ಎಚ್ಚರದಿಂದಿರುವುದು ಒಳಿತು.