ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷ:

ಶಿವಮೊಗ್ಗ, ಏ.3-ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರದ ಮನೆಯೊಂದರ ಮಂಚದ ಕೆಳಗೆ ಕಾಳಿಂಗಸರ್ಪ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಮನೆಯವರು ಹಾಗೂ ನೆರೆಮನೆಯವರು ಆತಂಕಗೊಂಡು ತಕ್ಷಣ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ತಜ್ಞರು ಹಾಗೂ ಅರಣ್ಯ ಸಿಬ್ಬಂದಿಗಳು ಜತೆಗೂಡಿ ಕಾಳಿಂಗಸರ್ಪವನ್ನು ಹಿಡಿದು ಸ್ಥಳೀಯ ಕಾಡಿಗೆ ಬಿಟ್ಟಿದ್ದಾರೆ.
ಕಾಳಿಂಗ ಸರ್ಪ ಕಂಡ ಸ್ಥಳೀಯರು ಭಯಭೀತಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ