ಇಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮೋತ್ಸವ

ತುಮಕೂರುಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವಕ್ಕೆ ಮಠದ ಅಂಗಳದಲ್ಲಿ ಇಂದು ನಡೆಯಲಿದೆ.

ಚುನಾವಣೆ ನೀತಿ ಸಂಹಿತೆ ಘೋಷಣೆ ಪ್ರಯುಕ್ತ ಈ ಬಾರಿ ರಾಜಕಾರಣಿಗಳು, ರಾಜ್ಯಪಾಲರು ಪಾಲ್ಗೊಳ್ಳುತ್ತಿಲ್ಲ. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ, ರಾಷ್ಟ್ರಪತಿಯವರನ್ನು ಅತಿಥಿಗಳಾಗಿ ಆಹ್ವಾನಿಸುವ ಪ್ರಯತ್ನ ನಡೆದಿತ್ತು. ಆದರೆ, ಚುನಾವಣೆ ನೀತಿ ಸಂಹಿತ ಯಾವಾಗಲಾದರೂ ಘೋಷಣೆಯಾಗಿ ಬಿಡಬಹುದು ಎಂಬ ಎಚ್ಚರಿಕೆಯಿಂದ ಯಾರನ್ನೂ ಅತಿಥಿಗಳಾಗಿ ಆಹ್ವಾನಿಸಲಿಲ್ಲ ಎಂದು ಮಠದ ಮೂಲಗಳು ಹೇಳಿವೆ.

ಈ ಬಾರಿ 111ನೇ ಜನ್ಮದಿನೋತ್ಸವ ಆಗಿರುವುದರಿಂದ ಅಂದಾಜು 1 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಅವರಿಗೆ ಉಪಹಾರ, ಊಟದ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಹಗಲು ಮತ್ತು ರಾತ್ರಿ ಹೊತ್ತು ಊಟ ವ್ಯವಸ್ಥೆ ನಡೆಯಲಿದೆ. ಉಪಹಾರಕ್ಕೆ ಕೇಸರಿ ಬಾತ್, ಖಾರಾ ಬಾತ್ ಮಾಡಲಾಗುವುದು. ಊಟಕ್ಕೆ ಬೂಂದಿ, ಖಾರಾ ಬೂಂದಿ, ಪಾಯಸ ಮಾಡಲಾಗುತ್ತಿದೆ ಎಂದು ಮಠದ ಮೂಲಗಳು ಹೇಳಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ