ಅಂದರ್-ಬಾಹರ್ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ

ಬೆಂಗಳೂರು, ಮಾ.31-ಆರ್.ಟಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮನೆ ಒಂದರಲ್ಲಿ ಅಂದರ್-ಬಾಹರ್ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ಐವರನ್ನು ಬಂಧಿಸಿ 80,200 ರೂ. ನಗದು ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುನೀರ್(48), ರಾಘವೇಂದ್ರ (55), ಮುನಿಯಪ್ಪ (46), ಮಂಜುನಾಥ್ (33) ಹಾಗೂ ನಾಗರಾಜ್ (49) ಬಂಧಿತ ಆರೋಪಿಗಳು.
ಆರ್.ಟಿ.ನಗರ ಪೆÇಲೀಸ್ ಠಾಣೆ ಸರಹದ್ದಿನ ಆತ್ಮಾನಂದ ಕಾಲೋನಿ, 8ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಗುಂಪೆÇಂದು ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್ ಅದೃಷ್ಟದ ಜೂಜಾಟ ಆಡುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಸಹಾಯಕ ಪೆÇಲೀಸ್ ಆಯುಕ್ತ ಟಿ.ಪಿ.ಸುಬ್ರಮಣ್ಯ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಕೆ.ಜಿ.ಸತೀಶ್ ಮತ್ತು ಹೆನ್ರಿಮಧನ್ ಹಾಗೂ ಸಿಬ್ಬಂದಿ ದಾಳಿ ನಡೆಸಿತು.
ದಾಳಿ ವೇಳೆ ಐವರನ್ನು ಬಂಧಿಸಿ ಅವರು ಪಣಕ್ಕೆ ಇಟ್ಟಿದ್ದ 80,200 ರೂ. ನಗದು, 52 ಇಸ್ಪೀಟ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ