ಜೆಡೆಎಸ್ ವಿರುದ್ದ ಜಮೀರ್ ಅಹಮದ್ ವಾಗ್ದಾಳಿ

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಜೆಡಿಎಸ್ ವಿರುದ್ದ
ವಾಗ್ದಾಳಿ ನೆಡೆಸಿದರು. ನನ್ನ ರಾಜಕೀಯ ಗುರು ದೇವೆಗೌಡರು ಎಂದು ಹೇಳಿದ ಜಮೀರ್, ಜೆಡಿಎಸ್‍ನಲ್ಲಿ ಸೂಟ್ಕೇಸ್ ಸಂಸ್ಕøತಿಯಿದೆ
ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಇದರ ಬಗ್ಗೆ ಹೇಳಿದ್ದಾರೆ, ಪ್ರಜ್ವಲ್ ರೇವಣ್ಣ ಅವರಿಗೆ ಅಲ್ಲಿ ಬೆಳೆಯಲು ಅವಕಾಶವಿಲ್ಲ, ಅವರ ಬೇಳವಣಿಗೆ ಕುಮಾರಸ್ವಾಮಿ ಅವರಿಗೆ ಆಗೋಲ್ಲ ಎಂದು ಹೇಳಿದರು. ಇನ್ನೂ ನಾವು ಬೆಳೆಯುವದನ್ನು ಹೇಗೆ ಸಹಿಸುತ್ತಾರೆ, ಪ್ರಜ್ವಲ್
ಕಾಂಗ್ರೇಸ್‍ಗೆ ಬಂದರೆ ನಾವು ಬೆಳೆಸುತ್ತೇವೆ ಎಂದು ಹೇಳಿದರು. ಜೆಡಿಎಸ್ 113 ಸ್ಥಾನಗಳನ್ನು ಗಳಿಸಿದರೆ ನಾನು ತಲೆ ಕತ್ತರಿಸಿ
ಕೊಳ್ಳುತ್ತೆನೆ ಎಂದು ಹೇಳಿದರು.

ಜೆಡಿಎಸ್‍ನ ಮತ್ತಿಬರು ಶಾಸಕರ ರಾಜಿನಾಮೆ:
ಬೆಂಗಳೂರು: ಮಾಗಡಿ ಶಾಸಕ ಬಾಲಕೃಷ್ಣ ಮತ್ತು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸ್ಪೀಕರ್ ಅವರ ಮನೆ ಬಂದು ಶಾಸಕ
ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ