ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ ದೋಚಿರುವ ಘಟನೆ

ಬೆಂಗಳೂರು, ಮಾ.23- ನಿರ್ಮಾಣ ಹಂತದ ಕಟ್ಟಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕ ದಂಪತಿ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ ದೋಚಿರುವ ಘಟನೆ ತಲಘಟ್ಟಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗುಬ್ಬಲಾಳದ 80 ಅಡಿ ರಸ್ತೆಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಮೂಲತಃ ಮದನಪಲ್ಲಿಯವರಾದ ಜಗನ್ನಾಥ್ ಎಂಬಾತ ತನ್ನ ಪತ್ನಿಯೊಂದಿಗೆ ಕೆಲಸಕ್ಕಾಗಿ ಬಂದು ಇಲ್ಲಿಯೇ ಶೆಡ್ ಹಾಕಿಕೊಂಡು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಬೆಳಗಿನ ಜಾವ ಸುಮಾರು 2ಗಂಟೆಯಲ್ಲಿ ಇಬ್ಬರು ದರೋಡೆಕೋರರು ಶೆಡ್ ಬಾಗಿಲು ತಟ್ಟಿದ್ದಾರೆ. ಕೆಲಸದವರು ಇರಬಹುದೆಂದು ಜಗನ್ನಾಥ್ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಒಳನುಗ್ಗಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಅವರ ಬಳಿ ಇದ್ದ ಚಿನ್ನದ ಸರ, ಒಂದು ಮೊಬೈಲ್ ಹಾಗೂ ಮೂರು ಸಾವಿರ ಹಣ ಕಿತ್ತು ಪರಾರಿಯಾಗಿದ್ದಾರೆ.

ಈ ಸಂಬಂಧ ತಲಘಟ್ಟಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ