ಆಟವಾಡುತ್ತಾ ನೀರಿನ ಸಂಪ್‍ಗೆ ಬಿದ್ದು ಆರು ವರ್ಷದ ಬಾಲಕಿ ಮೃತ

ಬೆಂಗಳೂರು, ಮಾ.9-ಆಟವಾಡುತ್ತಾ ನೀರಿನ ಸಂಪ್‍ಗೆ ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀಗಂಧ ನಗರದ ಹೆಗ್ಗನಹಳ್ಳಿಯ ದೇವೇಂದ್ರ-ಅಂಜಲಿ ಎಂಬುವರ ಪುತ್ರಿ ಹರಿಪ್ರಿಯಾ (6) ಮೃತಪಟ್ಟ ಬಾಲಕಿ.
ಇವರ ಮನೆಯಲ್ಲಿದ್ದ ಸಂಪ್‍ನಿಂದ ನೀರು ತೆಗೆದುಕೊಳ್ಳಲು ಪಕ್ಕದ ಮನೆಯವರು ಮುಚ್ಚಳ ತೆಗೆದು ಒಂದು ಬಿಂದಿಗೆ ನೀರು ತೆಗೆದುಕೊಂಡು ಮುಚ್ಚಳ ಹಾಕದೆ ಹಾಗೆಯೇ ಬಿಟ್ಟು ಹೋಗಿದ್ದಾಗ, ಈ ಮಗು ಆಟವಾಡುತ್ತಾ ಸಂಪ್‍ನಲ್ಲಿ ಬಿದ್ದಿದೆ.
ಮನೆಯವರು ತಕ್ಷಣ ಗಮನಿಸಿ ಮಗುವನ್ನು ಸಂಪ್‍ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಬಾಲಕಿ ಹರಿಪ್ರಿಯಾ ಎಲ್‍ಕೆಜಿ ವ್ಯಾಸಂಗ ಮಾಡುತ್ತಿದ್ದಳು. ಮಗುವಿನ ಸಾವಿನಿಂದ ಪೆÇೀಷಕರು ಹಾಗೂ ನೆರೆಹೊರೆಯವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ರಾಜಗೋಪಾಲ ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ