ನವದೆಹಲಿ:ಮಾ-2: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ವಕೀಲ ಅಭಿಷೇಕ್ ಮನು ಸಿಂಘ್ವಿ ಕಾರ್ತಿ ಪರ ಏನೇ ವಾದ ಮಾಡಿದರೂ , ನ್ಯಾಯಾಲಯ ಅದ್ಯಾವುದನ್ನು ಪರಿಗಣಿಸದೇ ಸಿಬಿಐ ವಶಕ್ಕೆ ಕಳುಹಿಸಿದೆ. ಕಾರ್ತಿ ವಿಚಾರಣೆಯಿಂದ ಚಿದಂಬರಂ ಅವರಿಗೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದರ ಬಗ್ಗೆ ತಿಳಿದು ಬರುತ್ತದೆ. ಈಗಾಗಲೇ ಕಾರ್ತಿ ಅವರನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಎಲ್ಲಾ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಚಿದಂಬರಂ ಯೋಜನೆಗೆ ಅನುಮೋದನೆ ನೀಡುವಾಗ ಅದರ ಮೌಲ್ಯ 5 ಕೋಟಿ ರೂ ಇತ್ತು, ಸಹಿ ಮಾಡಿದ ನಂತರ, 305ರೂ ಕೋಟಿ ಆಗಿತ್ತು ಎಂದು ತಿಳಿಸಿದ್ದಾರೆ. ಕಾರ್ತಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಭಿಷೇಕ್ ಸಿಂಗ್ವಿ ವಾದಿಸಿದ್ದಾರೆ. ಈ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ದೂರಿದ್ದಾರೆ.