ಟ್ರ್ಯಾಕ್ಟರ್‍ಗೆ ಬೈಕ್ ಡಿಕ್ಕಿ ಸವಾರರಿಬ್ಬರು ಸ್ಥಳದಲ್ಲೇ ಸಾವು

ದಾವಣಗೆರೆ, ಮಾ.3- ನಿಂತಿದ್ದ ಟ್ರ್ಯಾಕ್ಟರ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊನ್ನಾಳಿ ಪೆÇಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ನ್ಯಾಮತಿ ಗ್ರಾಮದ ಮಂಜುನಾಥ್ (21) ಹಾಗೂ ರಾಘವೇಂದ್ರ (23) ಮೃತ ಸವಾರರು.
ಹೊನ್ನಾಳಿ ತಾಲ್ಲೂಕಿನ ದೇವನಹಳ್ಳಿ-ತಕ್ಕನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಟ್ರ್ಯಾಕ್ಟರ್‍ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರ್ಯನಿಮಿತ್ತ ತಕ್ಕನಹಳ್ಳಿಗೆ ಬಂದಿದ್ದ ಮಂಜುನಾಥ್ ಮತ್ತು ರಾಘವೇಂದ್ರ ತಮ್ಮ ಸ್ವಗ್ರಾಮ ನ್ಯಾಮತಿಗೆ ಬೈಕ್‍ನಲ್ಲಿ ಹಿಂದಿರುಗುವಾಗ ನಿಂತಿದ್ದ ಟ್ರ್ಯಾಕ್ಟರ್‍ಗೆ ಗುದ್ದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹೊನ್ನಾಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ