ಸಿಖ್-ಲಿಂಗಾಯತ್- ಕ್ರೈಸ್ತ-ಬೌದ್ಧ- ಜೈನ ಯಾವುದೇ ಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯರು ನ್ಯಾಯವಾದಿ ಚನಬಸಪ್ಪಾ ಹಾಲಹಳ್ಳಿ..

ಬೀದರ: ಜಗತ್ತಿನಲ್ಲಿರುವ ಮಾನವರೆಲ್ಲರೂ ಒಂದು. ಮನುಷ್ಯ ಮನುಷ್ಯರಲ್ಲಿ ಭೇಧಭಾವ ಮೇಲು, ಕೀಳು ಭಾವನೆ
ಸಲ್ಲದು ಎಂದು ಹಿರಿಯ ನ್ಯಾಯವಾದಿ ಚನಬಸಪ್ಪಾ ಹಾಲಹಳ್ಳಿಯವರು ಹೇಳಿದರು.
ಸ್ಥಳೀಯ ಶಾಹೀನ ಕಾಲೇಜಿನ ಅವರಣದಲ್ಲಿ ಜಿಲ್ಲಾ ಸಧ್ಬಾವನಾ ಮಂಚ್ ಹಮ್ಮಿಕೊಂಡಿರುವ ನಾವೆಲ್ಲರೂ
ಒಂದು-ನಾವೆಲ್ಲರೂ ಬಂಧು ಯೆಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹಿಂದು-ಮುಸ್ಲಿಂ-
ಸಿಖ್-ಲಿಂಗಾಯತ್- ಕ್ರೈಸ್ತ-ಬೌದ್ಧ- ಜೈನ ಯಾವುದೇ ಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯರು, ಯಾವುದೇ
ಧರ್ಮಿಯರ ಆತ್ಮದಲ್ಲಿರುವ ದೇವರು ಒಬ್ಬನೆ ಇದ್ದಾನೆ. ನಮ್ಮ ಧಾರ್ಮಕ ವಿಧಾನಗಳು – ಭಾಷೆಗಳು ಬೇರೆ-ಬೇರೆ
ಇದ್ದರೂ ನಾವೆಲ್ಲರೂ ಮೂಲತ ಮನುಷ್ಯ ಜಾತಿಯವರಾಗಿದ್ದೇವೆಯೆಂದು ಚನಬಸಪ್ಪ ಹಾಲಹಳ್ಳಿ ಹೇಳಿದರು.
ಮುಹಮ್ಮದ್ ಅಬ್ದುಲ್ ಖದೀರ ಸಾಬ್ ರವರು ಮಾತನಾಡುತ್ತ ಹಿಂದು-ಮುಸ್ಲಿಂ- ಸಿಖ್-ಇಸಾಯಿ ಭಾಯಿ-
ಭಾಯಿ ಎಂಬ ಸಿದ್ದಾಂತದ ಮೇಲೆ ನಮ್ಮ ಸಂಸ್ಥೆ ನಂಬಿಕೆ ಇಟ್ಟು, ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ ಎಲ್ಲಾ
ಮನುಷ್ಯಲ್ಲಿರುವ ರಕ್ತ ಒಂದೇ, ನಾವೆಲ್ಲರೂ ಕುಡಿಯುವ ನೀರು-ವಾಸಿಸುವ ನೆಲ, ಸೇವಿಸುವ ಗಾಳಿ ಒಂದೇ ಆಗಿದೆ
ಹಿಗಾಗಿ ನಾವೆಲ್ಲರೂ ಒಂದೇ ಎಂದು ತಿಳಿಯಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕುಮಾರಿ ಕವಿತಾ ಹುಷಾರೆ ಮಾತನಾಡಿ ಮಕ್ಕಳು ಈ
ನಾಡಿನ ಆಸ್ತಿ ಅವರ ಪಾಲಿನೆ ಪೋಷಣೆ ನಮ್ಮ ಕರ್ತವ್ಯವಾಗಿದೆ. ನಾವುಗಳು ಜಾತಿ-ಧರ್ಮದ ಹೆಸರಿನಲ್ಲಿ ಕಚ್ಚಾಡದೆ
ಮನುಷ್ಯರೆಲ್ಲರೂ ಒಂದೆ ಎಂದು ತಿಳಿದು ನಡೆಯೋಣ ಎಂದರು.
ಇನ್ನೊರ್ವ ಅತಿಥಿ ಮುಹಮ್ಮದ್ ಅಸಿಫುದ್ದಿನ್ ಮಾತನಾಡುತ್ತಾ, ಮಸೀದಿಯಲ್ಲಿ ಮಲ-ಮೂತ್ರ ಆಗಲಿ, ಗುಡಿ
ಗುಂಡಾರದ ಮೇಲೆ ಗುಲಾಲ ಚೆಲ್ಲಿದ ಸಂದರ್ಭದಲ್ಲಿ ನಾವು ಸಹನೆಯಿಂದ ವರ್ತಿಸಬೇಕು, ತಿಳಿಯದ ವ್ಯಕ್ತಗಳು ಏನೊ
ತಪ್ಪು ಮಾಡಿದ್ದಾರೆಂದು ನಾವು ಭಾವಿಸಿ ಶಾಂತಿಯಿಂದ ಆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು. ಇಂತಹ
ಸಂದರ್ಭದಲ್ಲಿ ಜಾತಿ-ಜಾತಿಗಳ ಮಧ್ಯ ವೈಶಮ್ಯ ಹುಟ್ಟಿಸದೇ ವೈಚಾರಿಕತೆಯಿಂದ ವರ್ತಿಸಬೇಕು. ಧರ್ಮ ಅರಿಯದ
ಕೆಲವರು ಎಬ್ಬಿಸುವ ಸುಳ್ಳು ಸುದ್ದಿ ನಂಬಬೇಡಿ, ಯಾರೇ ತಪ್ಪು ಮಾಡಿದರೂ ಕ್ಷಮಿಸುವ ಗುಣ ಬೆಳಸಿಕೊಳ್ಳಿ. ಬುದ್ಧಿ ಹೇಳಿ
ತಿದ್ದುವ ಗುಣ ನಮ್ಮದಾಗಿರಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ