ಅಡ್ಡಾದಿಡ್ಡಿ ವಾಹನ ಚಾಲನೆ ಶಾಲಾ ಮಕ್ಕಳ ಬಲಿ

ಪಾಟ್ನಾ, ಫೆ.28-ಪಾನಮತ್ತನಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಒಂಭತ್ತು ಶಾಲಾ ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಮನೋಜ್ ಭೆತಾ ಕೊನೆಗೂ ಪೆÇಲೀಸರಿಗೆ ಶರಣಾಗಿದ್ದಾನೆ.
ಹಿಟ್ ಅಂಡ್ ರನ್ ಪ್ರಕರಣದ ನಂತರ ಶನಿವಾರದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಇಂದು ಮುಜಾಫರ್‍ಪುರ್ ಪೆÇಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೆÇಲೀಸರು ಆತನನ್ನು ಬಂಧಿಸಿದರು.
ಮನೋಜ್ ಚಾಲನೆ ಮಾಡುತ್ತಿದ್ದ ಬೊಲೆರೋ ವಾಹನ ಶಾಲೆಯೊಂದಕ್ಕೆ ನುಗ್ಗಿ ಒಂಭತ್ತು ಮಕ್ಕಳನ್ನು ಬಲಿ ಪಡೆದಿತ್ತು. ಈ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದರು.
ಪಾನ ನಿಷೇಧ ಜಾರಿಯಲ್ಲಿರುವ ಬಿಹಾರ ರಾಜ್ಯದಲ್ಲಿ ಬಿಜೆಪಿ ಮುಖಂಡನ ಈ ಕೃತ್ಯ ಪಕ್ಷಕ್ಕೆ ಭಾರೀ ಮುಜುಗರ ತಂದೊಡ್ಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ