ಜೋಗಫಾಲ್ಸ್ ನಲ್ಲಿ ಜ್ಯೋತಿ ರಾಜ್ ನಾಪತ್ತೆ

ಜೋಗಫಾಲ್ಸ್ ನಲ್ಲಿ ಜ್ಯೋತಿ ರಾಜ್ ನಾಪತ್ತೆ

ಶಿವಮೊಗ್ಗ: ಜಗದ ರಾಜಾಫಾಲ್ಸ್ ನಲ್ಲಿ ಸಿಲುಕಿಕೊಂಡಿರುವ ಜ್ಯೋತಿರಾಜ್ ಪತ್ತೆಗೆ ಕಾರ್ಯಾಚರಣೆ ಆರಂಭವಾಗಿದೆ.

ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ತಂಡದಿಂದ ಕಾರ್ಯಾಚರಣೆ ನಡೆದಿದೆ. ಇಪ್ಪತ್ತು ಜನರ ತಂಡದಿಂದ ಕಾರ್ಯಾಚರಣೆ ಆರಂಭವಾಗಿದ್ದು, ಬೋಟ್ ಹಾಗೂ ಡ್ರೋಣ್ ಕ್ಯಾಮರಾ ಬಳಸಲಾಗುತ್ತಿದೆ.

ಜೋಗ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದು, ಅವನ ಮೃತದೇಹ ಮೇಲೆಕ್ಕೆತ್ತಲು ಜ್ಯೋತಿರಾಜ್ ಮಂಗಳವಾರ ಜಲಪಾತಕ್ಕೆ ಇಳಿದಿದ್ದರು. ಆದರೆ ಅವರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ