ಬಿಜೆಪಿ ರೈತನ ಮನೆಗೆ ಹೋಗಿ ಒಂದು ಹಿಡಿ ಅಕ್ಕಿ ಸಂಗ್ರಹಿಸಿ ರೈತರ ಹಿತ ಕಾಪಾಡುವ ಶಪತ

ಬೀದರ್ ಫೆ25 –  ದೇಶದಲ್ಲಿ ಇಟ್ಟಿಗೆ ಸಂಗ್ರಹಿಸಿ ರಾಮ ಮಂದಿರ ನಿರ್ಮಾಣದ ಕಲ್ಪಣೆ ಇಟ್ಟಕೊಂಡು ಭಾರಿ ಜನಮತ ಪಡೆದಿದ್ದ ಬಿಜೆಪಿ ಈಗ ರೈತನ ಮನೆ ಮನೆಗೆ ಹೋಗಿ ಒಂದು ಹಿಡಿ ಅಕ್ಕಿ ಸಂಗ್ರಹಿಸಿ ರೈತರ ಹಿತ ಕಾಪಾಡುವ ಶಪತ ಮಾಡಲಿದೆ… ಹೌದು ಹೀಗೆ ರೈತರ ಮತಗಳನ್ನ ತನ್ನತ್ತ ಸೆಳೆಯಲು ಬಿಜೆಪಿ ಚಾಣಾಕ್ಯ ಅಮಿತ್ ಶಾ ಹೊಸದೊಂದು ಅಭಿಯಾನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ… ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರೈತರ ಬೆಂಬಲದಿಂದಲೆ ಬಿಜೆಪಿ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ… ಕರ್ನಾಟಕದಲ್ಲೂ ರೈತರಿಂದಲೆ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲೆ ರೈತರ ಸಹಯೋಗದೊಂದಿಗೆ ಅಧಿಕಾರಕ್ಕೆ ಬರಲಿದೆ… ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ರೈತರ ಮನೆ ಬಾಗಿಲಲ್ಲಿ ಹೋಗಿ ಹಿಡಿ ಅಕ್ಕಿಯನ್ನು ಸಂಗ್ರಹಿಸಿ ಪ್ರತಿಜ್ಞೆ ಮಾಡಲಿದೆ ಎಂದರು… ಇನ್ನೂ ಉದ್ಯೋಗಿಗಳ ಸಾಲ ಮನ್ನಾ ಮಾಡಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳ ಹೇಳ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು…

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ