‘ಕಪ್ಪು ಗುಲಾಬಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಹಿಂದೂಸ್ಥಾನ್ ಫಿಲಂಸ್ ಲಾಂಛನದಲ್ಲಿ ಆರ್.ವಿ.ರಮೇಶ್ ಯಾದವ್ ಅವರು ನಿರ್ಮಿಸುತ್ತಿರುವ `ಕಪ್ಪುಗುಲಾಬಿ` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಮೈಸೂರು ರಸ್ತೆ ಹಾಗೂ ರಾಮೋಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಮಾತಿನ ಭಾಗದ ಚಿತ್ರೀಕರಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶವೊಂದನ್ನು ಮೊದಲ ಹಂತದ ಚಿತ್ರೀಕರಣದಲ್ಲಿ ಚಿತ್ರಿಸಿಕೊಂಡಿರುವುದಾಗಿ ನಿರ್ದೇಶಕ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

ಸಾಗರ್ ಪುರಾಣಿಕ್, ನಿಖಿತ ನಾರಾಯಣ್, ಸುಧಾ ಬೆಳವಾಡಿ, ಸುಚೀಂದ್ರ ಪ್ರಸಾದ್, ನಾಗೇಂದ್ರ ಶಾ, ಮಧು ಹೆಗಡೆ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು. ನಾಯಕ ಸಾಗರ್ ಪುರಾಣಿಕ್ ಹಾಗೂ ನಾಯಕಿ ನಿಖಿತ ನಾರಾಯಣ್ ಅವರಿಗೆ ಚಿತ್ರೀಕರಣದ ಸಂದರ್ಭದಲ್ಲಿ ಸಣ್ಣ ಪೆಟ್ಟಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಸುನೀಲ್ ಪುರಾಣಿಕ್ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪವನ್ ಒಡೆಯರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅಭಿಲಾಷ್ ಛಾಯಾಗ್ರಹಣ, ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಮಹೇಶ್ ಸಂಕಲನ, ಬಾಲು ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಹಸ ನಿರ್ದೇಶನ ಹಾಗೂ ದೇವಿಪ್ರಸಾದ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಗರ್ ಪುರಾಣಿಕ್, ನಿಖಿತ ನಾರಾಯಣ್, ಸುಚೀಂದ್ರ ಪ್ರಸಾದ್, ಸುಧಾ ಬೆಳವಾಡಿ, ನಾಗೇಂದ್ರ ಶಾ, ಮಧು ಹೆಗಡೆ, ಶಿವಕುಮಾರ್ ಆರಾಧ್ಯ, ಮಂಜುನಾಥ್ ಹೆಗಡೆ, ಡ್ಯಾನಿಶ್ ಆಲಿ, ಸಂಯುಕ್ತ(ಹೊಸ ಪರಿಚಯ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ