ಈ ವಾರ ತೆರೆಗೆ `ತುಂತುರು’

ಕುಮಾರ್ ಮೂವೀಸ್ ಲಾಂಛನದಲ್ಲಿ ಸೋಮಶೇಖರ್, ವಿ.ಕುಮಾರ್, ಮಂಜು ಎಸ್ ಪಾಟೀಲ್ ಹಾಗೂ ಸತ್ಯಸಾಮ್ರಾಟ್ ಅವರು ನಿರ್ಮಿಸಿರುವ `ತುಂತುರು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮುಸ್ಸಂಜೆ ಮಹೇಶ್ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಫೈವ್ಸ್ಟಾರ್ ಗಣೇಶ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ಸೋಮಶೇಖರ್, ರಿಷಿಕಾ ಸಿಂಗ್ ಮುಂತಾದವರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ