ರೈತ ಮುಖಂಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನಿಧನ

 

[18/02, 23:11]ರೈತ ಮುಖಂಡ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಕೆ.ಎಸ್.ಪುಟ್ಟಣ್ಣಯ್ಯ ಕಬಡ್ಡಿ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದು ಮರಣ ಹೊಂದಿದ್ದಾರೆ..
#RIP?????

ಒಂದು ಗಂಟೆಗೆ ಮುಂಚೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬ್ಬಡ್ಡಿ ಪಂದ್ಯಾವಳಿಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಪುಟ್ಟಣ್ಣಯ್ಯ.ಕೆಲವರಿಗೆ ಸನ್ಮಾನ ಮಾಡಿ ತೆರಳಿದ್ದರು.ಇವತ್ತು ಅವರವ ಸ್ವಕ್ಷೇತ್ರ ಪಾಂಡವಪುರ ಮತ್ತು ಮದ್ದೂರು ತಂಡದ ಕಬ್ಬಡ್ಡಿ ಸ್ಪರ್ಧೆ ಇತ್ತು.ಪಾಂಡವಪುರ ತಂಡವೆ ಇವತ್ತು ವಿಜಯಶಾಲಿಯಾಗಿತು.
ಕಾರ್ಯಕ್ರಮದ ಸ್ಥಳದಲ್ಲೆ ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡ ಪುಟ್ಟಣ್ಣಯ್ಯ ನೇರ ಮಂಡ್ಯ ಪ್ರಗತಿ ನರ್ಸಿಂಗ್ ಹೋಂ ಗೆ ಬಂದಿದ್ದಾರೆ. ಅಲ್ಲಿ ವೈದ್ಯರು ಲಭ್ಯರಿರಲಿಲ್ಲ.ಅಲ್ಲಿಯೆ ಕುಸಿದು ಬಿದ್ದ ಪುಟ್ಟಣ್ಣಯ್ಯ ರನ್ನು ಮಂಡ್ಯ ಮಿಮ್ಸ್ ಗೆ ಕರೆದೊಯ್ಯಲಾಯಿತು.ತಕ್ಷಣ ನಾನು ಸಹ ಮಿಮ್ಸ್ ವೈದ್ಯರಿಗೆ ಸ್ಥಾನೀಕ ಸಹಾಯಕ ವೈದ್ಯರಿಗೂ ಕರೆ ಮಾಡಿ ತಿಳಿಸಿದೆ.ಸನ್ನದ್ದರಾಗಿದ್ದ ಮಿಮ್ಸ್ ವೈದ್ಯರು ತಂಡವಾಗಿ ಚಿಕಿತ್ಸೆ ನೀಡಿದರು ಅವರ ಹೃದಯ ಬಡಿತ ಸ್ಥಗಿತಗೊಂಡಿತ್ತು.
ಕರ್ನಾಟಕದ ರೈತ ಚಳುವಳಿಯ ಬಹುದೊಡ್ಡ ಅಧ್ಯಾಯವೊಂದು ಮುಗಿದಂತಾಗಿದೆ – ಎಂ.ಬಿ.ನಾಗಣ್ಣ , ಮಂಡ್ಯ ಪತ್ರಕರ್ತರು
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಶ್ರೀ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶ್ರೀಮತಿ ಕೆ.ಎಸ್. ಶಾರದಮ್ಮ ದಂಪತಿಯ ಜೇಷ್ಠಪುತ್ರರಾಗಿ ದಿನಾಂಕ 23.12.1949ರಲ್ಲಿ ಜನಿಸಿದ ಕೆ.ಎಸ್. ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಏಕೈಕ ಧೀಮಂತ ಹೋರಾಟಗಾರ.

ವಿದ್ಯಾಭ್ಯಾಸ

ಇವರು ತಮ್ಮ ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ.ಯನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಮೈಸೂರಿನಲ್ಲಿರುವ ಪ್ರತಿಷ್ಠಿತ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಾಡಿ ನಂತರ ಇದೇ ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. ಈ ರೀತಿ ವಿದ್ಯಾರ್ಥಿಯಾಗಿದ್ದಾಗಲೇ ಹಳ್ಳಿಗಾಡುಗಳಲ್ಲಿ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡ ಮಹಿಳೆಯರುಗಳು ಅನುಭವಿಸುತ್ತಿದ್ದ ಯಾತನಮಯ ಜೀವನಗಳನ್ನು ಕಣ್ಣಾರೆ ಕಂಡಿದ್ದ ಈ ಪದವೀದರ ಕೆ.ಎಸ್. ಪುಟ್ಟಣ್ಣಯ್ಯ ಅವರು ತಮ್ಮ ಮುಂದಿನ ವ್ಯಾಸಂಗಕ್ಕೆ ಹಾಗೂ ಸರ್ಕಾರಿ ನೌಕರಿಗೆ ಎಡತಾಕದೆ ಧೀನದಲಿತರುಗಳ ಏಳಿಗೆಗಾಗಿ ದುಡಿಯಬೇಕೆಂಬ ಅಚಲ ವಿಶ್ವಾಸದಿಂದ ಮಂಡ್ಯ ಜಿಲ್ಲೆಯಲ್ಲಿ ಈ ರೀತಿ ಕಷ್ಟ ಜೀವಿಗಳಿಗೆ ಸ್ಪಂಧಿಸುತ್ತಿದ್ದರು.

ರಾಜಕೀಯ ಪ್ರವೇಶ

ಎಸ್.ಡಿ. ಜಯರಾಂ ರವರ ಮಾರ್ಗದರ್ಶನದಲ್ಲಿ ಆಗಸ್ಟ್ 1983ರಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆಮಾಡಿ ತಮ್ಮ ಬಾಲ್ಯದಿಂದಲೂ ಬೇರೂರಿದ್ದ ಕೃಕರು, ಕೂಲಿಕಾರ್ಮಿಕರು, ಮಹಿಳೆಯರ ಶೋಷಣೆ ಇನ್ನಿತರ ಬಡ ಜನಾಂಗದವರುಗಳ ಏಳಿಗೆಗೆ ಶ್ರಮಿಸಬೇಕೆಂಬ ಮಹಾದಾಸೆುಂದ ಎಲ್ಲಾ ವರ್ಗದವರ ಪ್ರೀತಿ ಪಾತ್ರರಾಗಿ ಸಾಮಾನ್ಯ ಕಾರ್ಯಕರ್ತರಿಂದ ಪಾಂಡವಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಜನಪರ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದು ಸಫಲತೆಯನು ಕಣ್ಣಾರೆ ಕಂಡಂತಹ ಸುಧಿನಗಳಲ್ಲಿ ಇವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಞರಾಗಿ 1999 ರಿಂದ 2012ರ ವರೆಗೆ ಸಮರ್ಥವಾಗಿ ಜವಾಬ್ದಾರಿಯನ್ನು ನಿಬಾಯಿಸಿಕೊಂಡು ಬಂದು ಸರ್ವವರ್ಗದವರನ್ನು ಒಗ್ಗೂಡಿಸಿ ಸಂಘವನ್ನು ಮುನ್ನೆಡಿಸಿಕೊಂಡು ಬಂದು ಸರ್ವರಿಗೂ ಸೇವಾ ಸೌಲಭ್ಯಗಳ ಒದಗಿಸಿಕೊಂಡು ಬಂದಂತಹ ಕೀರ್ತಿ ಈ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರಿಗೆ ಸಲ್ಲಿರುತ್ತವೆ. ನಂತರ ಕರ್ನಾಟಕರಾಜ್ಯ ರೈತ ಸಂಘದ ಬೆಂಬಲಿನ ರಾಜಕೀಯ ಪಕ್ಷವಾದ, ‘ಸರ್ವೋದಯ ಕರ್ನಾಟಕ ಪಕ್ಷ’ದ ಕಾರ್ಯಾಧ್ಯಕ್ಷರಾಗಿ ಈವರೆವಿಗೂ ಸೇವೆಸಲ್ಲಿಸುತ್ತಿರುತ್ತಾರೆ.

ಈ ರೀತಿ ಸರ್ವಜನಾಂಗದವರ ಹಿತೈಯಾದ ಶ್ರೀ ಕೆ.ಎಸ್. ಪುಟ್ಟಣ್ಣಯ್ಯನವರಿಂದ ಹೆಚ್ಚಿನ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸದುಪಯೋಗಪಡಿಸಿಕೊಳ್ಳಬೇಕೆಂಬ ಮಹದಾಸೆುಂದ ಇವರನ್ನು 1994ನೇ ಇಸವಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರರಾಗಗಿ ಚುನಾಯಿಸಿ ಜಯಶೀಲರಾಗಿ ವಿಧಾನಸಭೆ ಪ್ರವೇಶಿಸಿ ಚೊಚ್ಚಲ ಅಧಿವೇಷನದಲ್ಲಿಯೇ ವಿಜೃಂಬಿಸಿದ್ದು ಸರ್ವರಿಗೂ ತಿಳಿದಿರುವುದಾಗಿದೆ.  ಈ ಅವಧಿಯಲ್ಲಿ ವಿಧಾನ ಸಭಾಧ್ಯಕ್ಷರಾಗಿದ್ದ ಜನರುಗಳ ಜೀವನದ ಸಾರಾಂಶಗಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಏಕೈಕ ಶಾಸಕರೆಂದು ಸಹ ಪ್ರಶಂಸಿದ್ದು ಇಂದಿಗೂ ಕೂಡ ಈ ಶ್ರೀ ಕೆ.ಎಸ್. ಪುಟ್ಟಣ್ಣಯ್ಯವರರನ್ನು ಕಂಡಂತೆ ಶ್ರೀ ಎಸ್. ರಮೇಶಕುಮಾರ್‍ರವರಿಗೆ ಎಲ್ಲಿಲ್ಲದ ಆದರ ಮತ್ತು ಪ್ರೀಸುವಂತಹ ವ್ಯಕ್ತಿಯಾಗಿರುತ್ತಾರೆ.

ಹೋರಾಟಗಳು

ಯಶಸ್ವಿ ಹೋರಾಟಗಳು – ಇವರ ಪ್ರಗತಿ ಹೋರಾಟದಿಂದ ಹಲವಾರು ಸಂಗತಿಗಳು ಪ್ರಗತಿಪರವಾಗಿರುತ್ತವೆ.

ಯಾವುದೇ ಹಳ್ಳಿಗಳಿಗೆ ಕಂದಾಯ ಅಧಿಕಾರರಿಗಳ ಮುನ್ಸೂನಚೆುಲ್ಲದೆ ಏಕಾಏಕಿ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆ ನಿರ್ಭಂಧಿಸಿರುವುದು.

ರಾಷ್ಟ್ರಕವಿಕ ಕುವೆಂಪು ರವರ ಮಾರ್ಗದರ್ಶನದಂತೆ ಕರ್ನಾಟಕದಾದ್ಯಂತ ‘ಸರಳ ವಿವಾಹ’ ನಡೆಸಲಾಗಿದೆ.

ರಾಜಕೀಯ ಪ್ರವೇಶ

ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯವನ್ನಾಳಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪ, ಎಸ್. ಧರ್ಮಸಿಂಗ್, ಎಸ್.ಎಂ. ಕೃಷ್ಣ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರರಪ್ಪ, ಡಿ.ವಿ. ಸದಾನಂದಗೌಡ ಇನ್ನಿತರೇ ರಾಜಕೀಯ ದಿಗ್ಗಜರುಗಳ ವಿರುದ್ಧ ಹೋರಾಡಿದವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ