ಬಾಲಕನೊಬ್ಬನನ್ನು ಕೊಂದು 35 ದಿನಗಳ ಕಾಲ ಪೆಟ್ಟಿಗೆಯಲ್ಲಿ ಇರಿಸಿದ್ದ ಯುವಕನನ್ನು ಪೋಲೀಸ್ರು ಬಂಧಿಸಿದ್ದಾರೆ

ನವದೆಹಲಿ, ಫೆ.14- ಐಎಎಸ್ ಅಧಿಕಾರಿಯಾಗುವ ಆಕಾಂಕ್ಷೆ ಹೊಂದಿದ್ದ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಬಾಲಕನೊಬ್ಬನನ್ನು ಕೊಂದು ತನ್ನ ಕೊಠಡಿಯಲ್ಲಿ ಶವವನ್ನು 35 ದಿನಗಳ ಕಾಲ ಪೆಟ್ಟಿಗೆಯಲ್ಲಿ ಇರಿಸಿದ್ದ ಪ್ರಕರಣ ದೆಹಲಿಯಲ್ಲಿ ನಡೆದಿದೆ.
ಈ ಸಂಬಂಧ ಅವದೇಶ್ ಸಖ್ಯ ಎಂಬ ಯುವಕನನ್ನು ಪೋಲೀಸ್ರು ಬಂಧಿಸಿದ್ದಾರೆ.

ತನ್ನ ಮನೆ ಮಾಲೀಕನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದ ಸಖ್ಯ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಜನವರಿ 7ರಂದು ಮನೆ ಮಾಲೀಕರ ಮಗ ಆಶಿಕ್ (7) ಎಂಬ ಬಾಲಕನಿಗೆ ಸೈಕಲ್ ಕೊಡಿಸುವ ಆಮಿಷವೊಡ್ಡಿ ಕರೆದೊಯ್ದು ಕತ್ತು ಹಿಸುಕಿ ಕೊಂದು ಹಾಕಿದ್ದ.
ನಂತರ ಪೆಟ್ಟಿಗೆಯೊಂದರಲ್ಲಿ ಬಾಲಕನ ಶವವನ್ನು ಇಟ್ಟು ತನ್ನ ಮನೆಯ ಕೊಠಡಿಯಲ್ಲಿ ಇರಿಸಿದ್ದ. ಶವವನ್ನು ಹೊರಗೆ ಸಾಗಿಸಲು ಸಮಯ ಕಾಯುತ್ತಿದ್ದ ಈತನಿಗೆ ಸೂಕ್ತ ಕಾಲಾವಕಾಶ ಒದಗಲಿಲ್ಲ.

ದಿನ ಕಳೆದಂತೆ ಶವದಿಂದ ದುರ್ನಾತ ಹೊರಹೊಮ್ಮುತ್ತಿತ್ತು. ಸುಗಂಧ ದ್ರವ್ಯ ಸಿಂಪಡಿಸಿ ವಾಸನೆ ತಪ್ಪಿಸಲು ಯತ್ನಿಸಿದ್ದ.
ಈ ಬಗ್ಗೆ ಅಕ್ಕಪಕ್ಕದವರು ಪ್ರಶ್ನಿಸಿದಾಗಲೆಲ್ಲ ಕೊಳೆತ ಇಲಿಯೊಂದನ್ನು ತೋರಿಸಿ ಸಮಯ ದೂಡುತ್ತಿದ್ದ.
ಬಾಲಕ ನಾಪತ್ತೆಯಾದ ಬಗ್ಗೆ ಪೆÇಲೀಸರು ಕ್ರಮ ಕೈಗೊಂಡು ತೀವ್ರ ತನಿಖೆ ನಡೆಸಿದರು. ಅನುಮಾನದ ಮೇರೆಗೆ ಅವದೇಶ್ ಸಖ್ಯನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತು.

ಫೋಟೋ ಕ್ರೆಡಿಟ್: timesofindia

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ