ಮಧ್ಯಪ್ರದೇಶದಲ್ಲಿ ಶಿವರಾತ್ರಿ ಪ್ರಸಾದ ಸೇವಿಸಿ 1,500ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಭೋಪಾಲ್, ಫೆ.14-ಮಹಾ ಶಿವರಾತ್ರಿ ಪ್ರಸಾದ (ಖಿಚಿಡಿ) ಸೇವಿಸಿ 1,500ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿನ್ನೆ ಸಂಭವಿಸಿದೆ.

ಆಶ್ರಮದಿಂದ ವರಾತ್ರಿ ಪ್ರಯುಕ್ತ ವಿತರಿಸಲಾಗಿದ್ದ ಪ್ರಸಾದ ಸೇವಿಸಿದ ನಂತರ ಗ್ರಾಮಸ್ಥರು ಹೊಟ್ಟೆ ನೋವಿನಿಂದ ನರಳಿ ವಾಂತಿ-ಬೇಧಿಯಿಂದ ನಿತ್ರಾಣಗೊಂಡರು. ನಂತರ ತೀವ್ರ ಅಸ್ವಸ್ಥರಾದವರನ್ನು ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಕಲೆಕ್ಟರ್ ತೇಜಸ್ವಿ ನಾಯಕ್ ತಿಳಿಸಿದ್ದಾರೆ.

ಫೋಟೋ ಕ್ರೆಡಿಟ್: zeenews(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ