ದಾರಿಯ ಮದ್ಯ ಮಂಡಕ್ಕಿ ಸವಿದ ರಾಹುಲ್

ರಾಯಚೂರು. ರಾಹುಲ್ ಗಾಂಧಿಯವರು ಜನಾಶಿರ್ವಾದ ಯಾತ್ರೆ ಮದ್ಯದಲ್ಲಿ ಹೋಟೆಲ್ ವೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು.

ರಾಯಚೂರನಿಂದ ದೇವದುರ್ಗ ಕ್ಕೆ ಹೋಗುವ ದಾರಿಯ ಮದ್ಯದಲ್ಲಿ ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ ಭದ್ರತೆ ನಡುವೆಯೂ ಬಸ್ ನ್ನು ಇಳಿದು ಹೋಟೆಲ್ ಗೆ ತೆರಳಿ ಮಿರ್ಚಿ ಮಂಡಕ್ಕಿ ಸವಿದರು.

 

ಇವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ,ಮುನಿಯಪ್ಪ ,ಮಲ್ಲಿಕಾರ್ಜುನ ಖರ್ಗೆ ವೀರಪ್ಪ ಮೋಯಿಲಿ ,ಡಿ.ಕೆ ಶಿವಕುಮಾರ್ ,ಬೋಸರಾಜು ಸೇರಿ ಹಲವರು ಮಂಡಕ್ಕಿ ಯನ್ನು ಸವಿದರು. ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ