ವಿಶ್ವ ಸರ್ಕಾರಿ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ದುಬೈ:ಫೆ-11: ತಂತ್ರಜ್ಞಾನ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಬೇಕೇ ಹೊರತು ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಬುದಾಬಿಯಲ್ಲಿ ನಡೆದ ವಿಶ್ವ ಸರ್ಕಾರೀ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಖುಷಿ ಸಂಗತಿಯಾಗಿದೆ ಎಂದು ಹೇಳಿದರು.

ತಂತ್ರಜ್ಞಾನವನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡರೆ ಮರುಭೂಮಿಯನ್ನು ಬದಲಿಸಬಹುದು ಎಂಬುದಕ್ಕೆ ದುಬೈ ಅತ್ಯುತ್ತಮ ಉದಾಹರಣೆಯಾಗಿದ್ದು, ನಿಜಕ್ಕೂ ಇದು ಅಚ್ಚರಿಯ ಸಂಗತಿ, ತಂತ್ರಜ್ಞಾನ ಆಲೋಚನೆಗಳ  ವೇಗವನ್ನು ಹೆಚ್ಚಿಸುತ್ತಿದ್ದು, ಸಾಮಾನ್ಯನಿಗೂ ತಂತ್ರಜ್ಞಾನ ಕೆಲಸ ನೀಡುತ್ತಿದೆ. ತಂತ್ರಜ್ಞಾನ ಎಂದರೆ ಅಭಿವೃದ್ಧಿ ಎಂದು ಪರಿಗಣಿಸಬೇಕೇ ಹೊರತು ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆ ಮಾಡಬಾರದು ಎಂದರು.

ಕೆಲ ರಾಷ್ಟ್ರಗಳು ತಂತ್ರಜ್ಞಾನ ಇರುವುದೇ ಮತ್ತೊಂದು ರಾಷ್ಟ್ರದ ವಿನಾಶಕ್ಕೆ ಎಂಬ ರೀತಿಯಲ್ಲಿ ವರ್ತಿಸುತ್ತಿವೆ.  ಇಂತಹ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು. ತಂತ್ರಜ್ಞಾನಕ್ಕೆ  ಸಂಬಂಧಿಸಿದಂತೆ ಜೀವವನದಲ್ಲಿ ಎಂದಿಗೂ ನಾವು 6 ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಕಡಿಮೆ, ಮರುಬಳಕೆ, ಮರುಸೃಷ್ಟಿ, ಚೇತರಿಸಿಕೊಳ್ಳುವುದು, ಪುನರ್ವಿನ್ಯಾಸ ಮಾಡು ಮತ್ತು ಪುನಃ ತಯಾರಿಸುವುದು ಎಂಬುದು ಈ  ಆರು ನಿಯಮಗಳು ಎಂದು ವಿವರಿಸಿದರು.

ಫೋಟೋ ಕ್ರೆಡಿಟ್: arabianbusiness.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ