ನಮ್ಮ ಸರ್ಕಾರದ್ದು ಕಾಮ್ ಕಿ ಬಾತ್ ಮೋದಿದು ಮನ್ ಕಿ ಖಾಲಿ ಬಾತ್

ಕೊಪ್ಪಳ: ಕೊಪ್ಪಳದ ಕಾರಟಗಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ. ನಮ್ಮ ಸರ್ಕಾರದ್ದು ಕಾಮ್ ಕಿ ಬಾತ್. ಮೋದಿದು ಮನ್ ಕಿ ಖಾಲಿ ಬಾತ್ನಾ ವು ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ನಮ್ಮ ಸರ್ಕಾರ. ದೇಶದ ಇತಿಹಾಸದಲ್ಲಿ ಚೆಕ್ ಮೂಲಕ ಲಂಚ ತಗೊಂಡು ಜೈಲಿಗೆ ಹೋದ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ.

ಜನಾರ್ದನರೆಡ್ಡಿ, ಹಾಲಪ್ಪ,ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ಜೈಲಿಗೆ ಹೋಗಿದ್ದರು. ಇಂತಹ ಲೂಟಿಕೋರರರಿಗೆ ಮತ್ತೆ ಅಧಿಕಾರ ಕೊಡಬೇಕಾ ಎಂದು ನೆರೆದ ಜನರ ಪ್ರಶ್ನಿಸಿದ ಸಿದ್ದರಾಮಯ್ಯ. ನಮ್ಮ ಸರ್ಕಾರ ಅನೇಕ ದೃಢವಾದ ಹೆಜ್ಜೆ ಇಟ್ಟು ಸಾಧನೆ ಮಾಡಿದೆ. ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಸುಳ್ಳು ಹೇಳ್ತಾರೆ. ಕರ್ನಾಕಟದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಹೇಳ್ತಾರೆ. ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶದಲ್ಲಿ ನಿಮ್ಮದೆ ಪಕ್ಷದ ಸರ್ಕಾರವಿದೆ‌. ಅಲ್ಲಿ ಕ್ರೈಂ ರೇಟ್ ಕರ್ನಾಟಕಕ್ಕಿಂತ ಜಾಸ್ತಿ ಇದೆ. ಕೊಲೆ ಕೇಸಲ್ಲಿ ಜೈಲಿಗೆ ಹೋದ ಅಸಾಮಿ ಅಮಿತ್ ಷಾ. ಅಂತಹ ವ್ಯಕ್ತಿಯನ್ನು ನಿಮ್ಮ‌ ಪಕ್ಷದ ಅಧ್ಯಕ್ಷನನ್ನಾಗಿ ಮಾಡಿಕೊಂಡಿದ್ದೀರಿ ನಾಚಿಕೆಯಾಗಬೇಕು ನಿಮಗೆ.

ಫೋಟೋ ಕ್ರೆಡಿಟ್: hindustantimes.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ