ಸಂತೋಷ್ ಹತ್ಯೆಗೆ ಬಳಸಿದ್ದು ಚಾಕು, ಸ್ಕ್ರೂಡ್ರೈವರ್ ಅಲ್ಲ

ಬೆಂಗಳೂರು, ಫೆ.11-ಜೆಸಿನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಪ್ರಕರಣವನ್ನು ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ.
ಪ್ರಮುಖವಾಗಿ ಸಂತೋಷ್ ಹತ್ಯೆಗೆ ಸ್ಕ್ರೂಡ್ರೈವರ್ ಬಳಸಲಾಗುತ್ತಿತ್ತು ಎಂದು ಹೇಳಲಾಗಿತ್ತು. ಆದರೆ ಹತ್ಯೆಗೆ ಬಳಸಿದ್ದು ಚಾಕು ಎಂದು ಗೊತ್ತಾಗಿದೆ.
ಬಂಧಿತ ಆರೋಪಿಗಳು ದುಷ್ಕøತ್ಯ ನಂತರ ಆ ಚಾಕುವನ್ನು ಸ್ನೇಹಿತನಿಗೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ವಿಚಾರಣೆ ವೇಳೆ ಈ ಮಾಹಿತಿ ತಿಳಿದ ಸಿಸಿಬಿ ಪೆÇಲೀಸರು ಇಂದು ಬೆಳಗ್ಗೆ ಜೆಸಿನಗರ ಮೊದಲನೇ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಫೋಟೋ ಕ್ರೆಡಿಟ್: udayavani.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ